‘ವಿಷಯ ಬೆಳೆಸಬೇಡಿ. ನಿಮಗೆ ನೋವಾಗಿದ್ದರೆ ವಿಷಾದಿಸುತ್ತೇನೆ’ ಎಂದು ಸಚಿವರು ಹೇಳಿದರು. ‘ಇಬ್ಬರು ಪಾಟೀಲರು ಸೇರಿ ಇನ್ನೊಬ್ಬ ಪಾಟೀಲರ ಕುರಿತು ನಡೆಸಿದ ಚರ್ಚೆ ಇದು’ ಎಂದ ಬಿಜೆಪಿಯ ಬಸವರಾಜ ಬೊಮ್ಮಾಯಿ, ವಿಜಯಪುರ ಜಿದ್ದಾಜಿದ್ದಿ ರಾಜಕಾರಣ ಸದನದಲ್ಲೂ ವಾಗ್ವಾದಕ್ಕೆ ಕಾರಣವಾಗಿದೆ ಎಂಬ ಗುಟ್ಟನ್ನು ಬಿಚ್ಚಿಟ್ಟರು. ಅದಕ್ಕೆ ಸಭಾಧ್ಯಕ್ಷರು, ‘ಓಹ್, ಆ ವಿಷಯವೇ ಇದು. ಈಗ ಎಲ್ಲ ಅರ್ಥವಾಯ್ತು ಬಿಡಿ’ ಎಂದು ಪ್ರತಿಕ್ರಿಯಿಸಿದರು.