ಶಾಕ್ತ ಸಂಸ್ಕೃತಿಯ ಜನಕರೂ ಆದ ವಿಶ್ವಕರ್ಮರು ಕಾರಣಾಂತರಗಳಿಂದ ಸಂಸ್ಕೃತ ಅಧ್ಯಯನದಿಂದ ವಂಚಿತರಾದದ್ದಿದೆ. ಸಂಸ್ಕೃತ ಅಧ್ಯಯನ, ವೇದ-ಉಪನಿಷತ್ಗಳ ಅಧ್ಯಯನ ಇಂದು ಯಾವುದೇ ಒಂದು ವರ್ಗದ ಸ್ವತ್ತಾಗಿ ಉಳಿದಿಲ್ಲ.ಚಂದ್ರಶೇಖರಾಚಾರ್ಯರು 100 ವರ್ಷಗಳ ಹಿಂದಿನ ಕಾಲದ ಸಂಸ್ಕೃತ ವೇದ, ಉಪನಿಷತ್ಗಳ ಅಧ್ಯಯನ ಮಾಡಿ, ವಿಶ್ವಕರ್ಮರ ಸಾಧನೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ದಾಖಲಿಸಲು ಸಾಧ್ಯವಾಗಿದೆ ಎಂದರು.