ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿ, ‘ಜೀವನ ಚರಿತ್ರೆಯಲ್ಲಿ ಎಲ್ಲವನ್ನು ಹಿಡಿದಿಡಲು ಸಾಧ್ಯವಿಲ್ಲ. ಆದರೆ, ಆತ್ಮಚರಿತ್ರೆ ಬರೆಯುವುದು ಸುಲಭವೂ ಅಲ್ಲ, ಅನೇಕ ಸಂಗತಿಗಳನ್ನು ಬರೆಯುವಂತೆ ಇರುವುದಿಲ್ಲ. ತಮ್ಮ ದೌರ್ಬಲ್ಯಗಳನ್ನು ಹೇಳಿಕೊಳ್ಳಲು ಯಾರೂ ಇಷ್ಟ ಪಡುವುದಿಲ್ಲ. ಆದ್ದರಿಂದ, ಯಾರು ಆತ್ಮಚರಿತ್ರೆ ಬರೆಯುವ ಗೊಡವೆಗೆ ಹೋಗುವುದಿಲ್ಲ. ಈ ಮಿತಿಗಳು ಚರಿತ್ರೆಕಾರನಿಗೂ ಇರುತ್ತವೆ’ ಎಂದರು.