ಜೂನ್ 2ರಂದು ಮಧುಪೂರ್ಣಿಮಾ ಕಿಶ್ವರ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಅವರು ಸಲಿಂಗ ಕಾಮಿಗಳೆಂದು ಅರ್ಥ ಬರುವ ರೀತಿಯಲ್ಲಿ ಅಸಭ್ಯವಾಗಿ ಬರೆದಿದ್ದಾರೆ ಎಂದು ಪರಿಷತ್ನ ಆದರ್ಶ್ ಆರ್. ಅಯ್ಯರ್ ಅವರು 2019 ಜೂನ್ 19ರಂದು ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಸಾಮಾಜಿಕ ಜಾಲತಾಣಗಳಿಗೆ ಸಂಬಂಧಿಸಿ ಇಂಥ ಹಲವು ದೂರುಗಳು ಬರುತ್ತಿವೆ ಎಂದು ಸೈಬರ್ ಠಾಣೆ ಪೊಲೀಸರು ಈ ಬಗ್ಗೆ ಹೆಚ್ಚು ಗಮನಹರಿಸಿರಲಿಲ್ಲ. ಹೀಗಾಗಿ, ಪರಿಷತ್ ನ್ಯಾಯಾಲಯಕ್ಕೆ ದೂರು ನೀಡಿತ್ತು.