ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಲ ಸಂರಕ್ಷಣೆ ಮೇಳ’ಕ್ಕೆ ಚಾಲನೆ

Last Updated 5 ಮಾರ್ಚ್ 2021, 2:55 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಜ್ಯ ನೀರಿನ ಸಂಸ್ಕರಣೆ, ಮರುಬಳಕೆ ಹಾಗೂ ಜಲ ಸಂರಕ್ಷಣೆಯ ಕುರಿತು ಆಧುನಿಕ ವಿಧಾನ ಮತ್ತು ತಂತ್ರಜ್ಞಾನಗಳನ್ನು ಪರಿಚಯಿಸುವ ಉದ್ದೇಶದಿಂದವಾಟರ್ ಇಂಡಿಯಾ ಸಂಸ್ಥೆಯು ‘ಜಲ ಉತ್ಸವ’ ಶೀರ್ಷಿಕೆಯಡಿ ಜಲಸಂರಕ್ಷಣೆಮೇಳವನ್ನು ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ಮ್ಯಾನ್‌ಫೋ ಕನ್ವೆಂಷನ್ ಸೆಂಟರ್‌ನಲ್ಲಿ ಆಯೋಜಿಸಿದೆ.

ಮೇಳಕ್ಕೆ ಅಧಿಕೃತವಾಗಿಗ್ರಾಹಕರಿಂದಲೇ ಗುರುವಾರ ಚಾಲನೆ ನೀಡಲಾಯಿತು. ಮಾ.6ರವರೆಗೆ ಈ ಮೇಳ ನಡೆಯಲಿದೆ.

‘ಮೂರು ದಿನಗಳು ನಡೆಯುವ ಮೇಳದಲ್ಲಿ ನೀರು ಶುದ್ಧೀಕರಣ ಯಂತ್ರಗಳ ಪ್ರದರ್ಶನ, ಮಳೆನೀರು ಸಂಗ್ರಹ ಹಾಗೂ ನೀರಿನ ಸಂರಕ್ಷಣೆ ವಿಧಾನಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಮಾಹಿತಿಯನ್ನು ಸಾರ್ವಜನಿಕರು ಉಚಿತವಾಗಿ ಪಡೆದುಕೊಳ್ಳಬಹುದು’ ಎಂದು ಮೇಳದ ಆಯೋಜಕ ರಾಜೇಶ್ ತಿಳಿಸಿದರು.

‘ತಮ್ಮದಿನನಿತ್ಯದಬಳಕೆಯನಡುವೆಯೂನೀರಿನಶೇಖರಣೆಹಾಗೂ ಸಂಸ್ಕರಣೆ ಕುರಿತು ವಸ್ತು ಪ್ರದರ್ಶನದಲ್ಲಿ ತಿಳಿದುಕೊಳ್ಳಬಹುದು. ವಿಶ್ವದಾದ್ಯಂತ ಹೆಚ್ಚಾಗುತ್ತಿರುವ ತಾಪಮಾನದ ಪರೋಕ್ಷ ಪರಿಣಾಮ ನೀರಿನ ಮೇಲೆ ಬಿದ್ದಿದೆ. ಇದರಿಂದ ಬಳಕೆಗೆ ಯೋಗ್ಯವಾದ ನೀರಿನ ಪ್ರಮಾಣ ಕುಸಿಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೀರಿನ ಸಂರಕ್ಷಣೆ ಹಾಗೂ ಮರುಬಳಕೆ ವಿಧಾನಗಳ ಪ್ರದರ್ಶನಕ್ಕೆ ಮೇಳ ವೇದಿಕೆ ಕಲ್ಪಿಸಿದೆ’ ಎಂದರು.

‘ಮಲಿನಗೊಂಡನೀರಿನಮರುಬಳಕೆ ವಿಧಾನ, ಶುದ್ಧೀಕರಣಕುರಿತು 120ಕ್ಕೂಹೆಚ್ಚು ನೀರಿನ ಶುದ್ಧೀಕರಣ ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಿವೆ. ಮೇಳಕ್ಕೆ ಬರುವ ಸಾರ್ವಜನಿಕರಿಗೆ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಗುತ್ತಿದೆ.ಜಪಾನ್,ಜರ್ಮನ್,ಚೀನಾ ಹಾಗೂಭಾರತದ ವಿವಿಧ ರಾಜ್ಯಗಳಕಂಪನಿಗಳುಪ್ರದರ್ಶನದಲ್ಲಿಭಾಗಿಯಾಗಿವೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT