‘ನಗರಕ್ಕೆ ಪೂರೈಸಲು ನಾವು ಕಾವೇರಿ ನೀರನ್ನೇ ನೆಚ್ಚಿಕೊಂಡಿದ್ದೇವೆ. ಮುಂಗಾರು ಕೈಕೊಟ್ಟರೆ ಹಾಗೂ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಎಣಿಸಿದಷ್ಟು ಪ್ರಮಾಣದಲ್ಲಿ ಒಳಹರಿವು ಇಲ್ಲದಿದ್ದರೆ ನಾವು ನಗರಕ್ಕೆ ನೀರು ಪೂರೈಸುವುದಾದರೂ ಹೇಗೆ? ನನಗೆ ಬಂದ ವರದಿಗಳ ಪ್ರಕಾರ ಕೆಆರ್ಎಸ್ಗೆ ಈ ಮಳೆಗಾಲದಲ್ಲಿ 3 ಟಿಎಂಸಿ ಅಡಿಗಳಷ್ಟು ನೀರು ಹರಿದು ಬಂದಿದೆ. ಈ ತಿಂಗಳಲ್ಲಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ನಾವಿದ್ದೇವೆ’ ಎಂದು ಗಂಗಾಧರ್ ತಿಳಿಸಿದರು.