<p><strong>ಬೆಂಗಳೂರು</strong>: ‘ಪ್ರಶಸ್ತಿ ನೀಡುವಾಗ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮಂಥವರು ಬಹಿಷ್ಕೃತರ ಪಟ್ಟಿಯಲ್ಲಿದ್ದು, ಸರ್ಕಾರ ಖಂಡಿತ ಪ್ರಶಸ್ತಿ ನೀಡುವುದಿಲ್ಲ’ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಬೇಸರ ವ್ಯಕ್ತಪಡಿಸಿದರು.</p>.<p>ಸುಂದರ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಶಸ್ತಿಗೆ ಆಯ್ಕೆ ಮಾಡುವಾಗ ನಮ್ಮವರು, ಸ್ನೇಹಿತರು ಎಂಬುದು ಇರಬಾರದು. ಮಾಡಿದ ಕೆಲಸವನ್ನು ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ನಟಿ, ನಿರ್ದೇಶಕಿ ಎಸ್.ವಿ.ಸುಷ್ಮಾ ಮಾತನಾಡಿ, ‘ಬದುಕಿನಲ್ಲಿ ಏರುಪೇರುಗಳನ್ನು ಕಂಡಿದ್ದೇನೆ. ಜೀವನವನ್ನು ಪ್ರೀತಿಸಲು ರಂಗಭೂಮಿ ಶಕ್ತಿ ನೀಡಿದೆ. ಒಬ್ಬ ಕಲಾವಿದನಿಗೆ ತನ್ನ ಎಲ್ಲ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಹೆಚ್ಚು ಅವಕಾಶ ಇರುವುದು ರಂಗಭೂಮಿಯಲ್ಲಿ ಮಾತ್ರ’ ಎಂದು ತಿಳಿಸಿದರು.</p>.<p>ಮಂ.ಆ. ವೆಂಕಟೇಶ್ ಅವರ ‘ಕರ್ನಾಟಕ ರಾಜ್ಯ ರಮಾರಮಣರು’ ಪುಸ್ತಕ ಬಿಡುಗಡೆ ಮಾಡಲಾಯಿತು. ವಿಜಯನಗರ ಬಿಂಬ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಯದ ಶಿಷ್ಯವೃಂದದಿಂದ ‘ರಂಗ ಕವನ’ ಪ್ರಾಯೋಗಿಕ ರಂಗ ಪ್ರಸ್ತುತಿ ನಡೆಯಿತು. ರಂಗಕರ್ಮಿ ಗುಂಡಣ್ಣ, ಸಾಹಿತಿ ಎಚ್. ಗೋಪಾಲಕೃಷ್ಣ, ಇಂದಿರಾ ಸುಂದರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ‘ಪ್ರಶಸ್ತಿ ನೀಡುವಾಗ ಸರ್ಕಾರ ತಾರತಮ್ಯ ಮಾಡುತ್ತಿದೆ. ನಮ್ಮಂಥವರು ಬಹಿಷ್ಕೃತರ ಪಟ್ಟಿಯಲ್ಲಿದ್ದು, ಸರ್ಕಾರ ಖಂಡಿತ ಪ್ರಶಸ್ತಿ ನೀಡುವುದಿಲ್ಲ’ ಎಂದು ಕವಿ ಬಿ.ಆರ್. ಲಕ್ಷ್ಮಣರಾವ್ ಬೇಸರ ವ್ಯಕ್ತಪಡಿಸಿದರು.</p>.<p>ಸುಂದರ ಪ್ರಕಾಶನ ಭಾನುವಾರ ಹಮ್ಮಿಕೊಂಡಿದ್ದ ‘ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಪ್ರಶಸ್ತಿಗೆ ಆಯ್ಕೆ ಮಾಡುವಾಗ ನಮ್ಮವರು, ಸ್ನೇಹಿತರು ಎಂಬುದು ಇರಬಾರದು. ಮಾಡಿದ ಕೆಲಸವನ್ನು ನೋಡಿ ಪ್ರಶಸ್ತಿಗೆ ಆಯ್ಕೆ ಮಾಡಬೇಕು’ ಎಂದು ಸಲಹೆ ನೀಡಿದರು.</p>.<p>ಗೌರಿ ಸುಂದರ್ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ನಟಿ, ನಿರ್ದೇಶಕಿ ಎಸ್.ವಿ.ಸುಷ್ಮಾ ಮಾತನಾಡಿ, ‘ಬದುಕಿನಲ್ಲಿ ಏರುಪೇರುಗಳನ್ನು ಕಂಡಿದ್ದೇನೆ. ಜೀವನವನ್ನು ಪ್ರೀತಿಸಲು ರಂಗಭೂಮಿ ಶಕ್ತಿ ನೀಡಿದೆ. ಒಬ್ಬ ಕಲಾವಿದನಿಗೆ ತನ್ನ ಎಲ್ಲ ಪ್ರತಿಭೆಯನ್ನು ಅಭಿವ್ಯಕ್ತಿಗೊಳಿಸಲು ಹೆಚ್ಚು ಅವಕಾಶ ಇರುವುದು ರಂಗಭೂಮಿಯಲ್ಲಿ ಮಾತ್ರ’ ಎಂದು ತಿಳಿಸಿದರು.</p>.<p>ಮಂ.ಆ. ವೆಂಕಟೇಶ್ ಅವರ ‘ಕರ್ನಾಟಕ ರಾಜ್ಯ ರಮಾರಮಣರು’ ಪುಸ್ತಕ ಬಿಡುಗಡೆ ಮಾಡಲಾಯಿತು. ವಿಜಯನಗರ ಬಿಂಬ ಮತ್ತು ಪಿ.ಇ.ಎಸ್. ವಿಶ್ವವಿದ್ಯಾಯದ ಶಿಷ್ಯವೃಂದದಿಂದ ‘ರಂಗ ಕವನ’ ಪ್ರಾಯೋಗಿಕ ರಂಗ ಪ್ರಸ್ತುತಿ ನಡೆಯಿತು. ರಂಗಕರ್ಮಿ ಗುಂಡಣ್ಣ, ಸಾಹಿತಿ ಎಚ್. ಗೋಪಾಲಕೃಷ್ಣ, ಇಂದಿರಾ ಸುಂದರ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>