‘ಸರ್ಕಾರವು ಇತ್ತೀಚೆಗೆ ಅನೇಕ ಜನಾಂಗಗಳಿಗೆ ಅಭಿವೃದ್ಧಿ ನಿಗಮಗಳನ್ನು ರಚಿಸಿ ಅನುಕೂಲ ಕಲ್ಪಿಸುತ್ತಿದೆ. ನೇಕಾರ ಸಮುದಾಯಕ್ಕೆ ಸೇರಿರುವ ದೇವಾಂಗ, ಪದ್ಮಶಾಲಿ, ಕುರುಹಿನಶೆಟ್ಟಿ, ತೋಗಟವೀರ, ಪಟ್ಟಸಾಲಿ, ಸ್ವಕುಳಸಾಳಿ, ಹಟಗಾರ, ಕೋಷ್ಟಿ, ಶಿವಸಮಸಾಲಿ, ಶೆಟ್ಟಿಗಾರ್ ಮೊದಲಾದ ಜಾತಿಗಳಿಗೆ ವಿಶೇಷ ಸವಲತ್ತು ಕಲ್ಪಿಸಲು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.