<p><strong>ಬೆಂಗಳೂರು:</strong> ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಒಣ ಹಣ್ಣುಗಳು (ಡ್ರೈ ಫ್ರೂಟ್ಸ್), ಖರ್ಜೂರ ಸೇರಿದಂತೆ ಮಸಾಲೆ ಪದಾರ್ಥಗಳ ಸಾಗಾಟದ ಮೇಲೂ ಪರಿಣಾಮ ಬೀರಿದೆ. ಇದರಿಂದ ಇರಾನ್ನಿಂದ ಬೆಂಗಳೂರಿಗೆ ಬರುವ ಒಣ ಹಣ್ಣುಗಳ ಆಮದಿನಲ್ಲಿ ವ್ಯತ್ಯಯವಾಗಿ ದರವೂ ಹೆಚ್ಚಳವಾಗಿದೆ. </p>.<p>ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳಾದ ಕೊಲ್ಲಿ ದೇಶಗಳ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಇದರಿಂದ ಕೊಲ್ಲಿ ದೇಶಗಳಲ್ಲಿ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಏರ್ಪಟ್ಟಿದೆ. ಅಲ್ಲಿಂದ ಭಾರತಕ್ಕೆ ಒಣಹಣ್ಣುಗಳು ಹಾಗೂ ಖರ್ಜೂರ ಆಮದಿನಲ್ಲಿ ವ್ಯತ್ಯಯವಾಗಿದೆ. ರಂಜಾನ್ ತಿಂಗಳಲ್ಲಿ ಖರ್ಜೂರಕ್ಕೆ ಬೇಡಿಕೆ ಇರುತ್ತದೆ. ಈ ಸಮಯದಲ್ಲಿ ಮುಸ್ಲಿಮರು ಖರ್ಜೂರ ಸೇವಿಸುವ ಮೂಲಕ ಉಪವಾಸ ಮುಕ್ತಾಯಗೊಳಿಸುತ್ತಾರೆ.</p>.<p>‘ರಂಜಾನ್ ಹಬ್ಬದಲ್ಲಿ ಹೆಚ್ಚು ಬೇಡಿಕೆ ಇರುವ ಖರ್ಜೂರ ಹಾಗೂ ಒಣ ಹಣ್ಣುಗಳನ್ನು ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿದೆ. ನಮ್ಮ ಬಳಿ ಈಗ 15ರಿಂದ 20 ದಿನಗಳವರೆಗೆ ಆಗುವಷ್ಟು ದಾಸ್ತಾನು ಇದೆ. ಇದು ಖಾಲಿಯಾದರೆ ಸಮಸ್ಯೆ ಆಗಲಿದೆ. ಇರಾನ್ನ ಅಬ್ಬಾಸ್ ಬಂದರಿನ ಮೂಲಕ ಭಾರತಕ್ಕೆ ಖರ್ಜೂರ, ಒಣ ಹಣ್ಣುಗಳು ಸೇರಿದಂತೆ ಮಸಾಲೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈಗ ಅಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಕಂಟೋನ್ಮೆಂಟ್ ಫ್ರೂಟ್ಸ್ ಆ್ಯಂಡ್ ಡ್ರೈ ಫ್ರೂಟ್ಸ್ ಮರ್ಚೆಂಟ್ ಅಸೋಸಿಯೇಷನ್ನ ಅಧ್ಯಕ್ಷ ಮಹಮ್ಮದ್ ಇದ್ರೀಸ್ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಇರಾನ್ನಿಂದ ಪ್ಲೇನ್ ಪಿಸ್ತಾ, ಬಾದಾಮಿ, ಅಂಜೂರ, ಒಣದ್ರಾಕ್ಷಿ, ಪೈನ್ ನಟ್ಸ್ ಹಾಗೂ ಮಸಾಲೆ ಪದಾರ್ಥಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ಸೌದಿ ಅರೇಬಿಯಾ, ಇರಾಕ್, ಅಫ್ಗಾನಿಸ್ತಾನ, ಜೋರ್ಡನ್ನಿಂದ ಬರುವ ಖರ್ಜೂರ ವಾಲ್ನಟ್ಸ್ಗೆ ನಮ್ಮಲ್ಲಿ ಭಾರಿ ಬೇಡಿಕೆ ಇದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯವಾಗಿ ಬೇಡಿಕೆ ಹೆಚ್ಚಲಿದ್ದು, ಶೇಕಡ 50ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು. </p>.<p>‘ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮುಂದುವರಿದರೆ ಇರಾನ್ನ ಒಂದು ಕೆ.ಜಿ ಅಂಜೂರ ₹1,800, ಮಬರೂಮ್ ಖರ್ಜೂರ ₹3,200, ಒಂದು ಗ್ರಾಂ ಕೇಸರಿಗೆ ₹350, ಏಲಕ್ಕಿ ₹3,800, ಕರಿಮೆಣಸು ₹1,800ರವರೆಗೆ ಹೆಚ್ಚಳವಾಗಲಿದೆ. ಇವುಗಳ ಬೆಲೆ ಸದ್ಯಕ್ಕೆ ಕಡಿಮೆ ಇದೆ’ ಎಂದು ವಿವರಿಸಿದರು. </p>.<div><blockquote>ಈಗಾಗಲೇ ಸರಬರಾಜು ಆಗಿರುವ ಒಣ ಹಣ್ಣುಗಳನ್ನು ಮುಂಬೈ ಹಾಗೂ ದೆಹಲಿಯ ಮಧ್ಯವರ್ತಿಗಳು ದಾಸ್ತಾನು ಇಟ್ಟುಕೊಂಡಿದ್ದಾರೆ. ಪೂರೈಕೆ ಕಡಿಮೆಯಾಗಿರುವ ಸಂದರ್ಭವನ್ನು ಬಳಸಿಕೊಂಡು ಅವರು ಬೆಲೆ ಏರಿಕೆ ಮಾಡಲಿದ್ದಾರೆ.</blockquote><span class="attribution">– ಮಹಮ್ಮದ್ ಇದ್ರೀಸ್ ಚೌಧರಿ, ಕಂಟೋನ್ಮೆಂಟ್ ಫ್ರೂಟ್ಸ್ ಆ್ಯಂಡ್ ಡ್ರೈ ಫ್ರೂಟ್ಸ್ ಮರ್ಚೆಂಟ್ ಅಸೋಸಿಯೇಷನ್ನ ಅಧ್ಯಕ್ಷ</span></div>.<p><strong><ins>ಖರ್ಜೂರದ ದರ (1 ಕೆ.ಜಿಗೆ)</ins></strong></p><ul><li><p>ಮುಜಫಿರತ್ ಖರ್ಜೂರ; ₹200</p></li><li><p>ಕಲ್ಮಿ ಖರ್ಜೂರ; ₹700</p></li><li><p>ಸುಗಾಯಿ ಖರ್ಜೂರ; ₹700</p></li><li><p>ಅಜೂವಾ ಖರ್ಜೂರ; ₹1200</p></li><li><p>ಮಬರೂಮ್ ಖರ್ಜೂರ; ₹1200</p></li></ul><p><strong><ins>ಡ್ರೈಫ್ರೂಟ್ಸ್ ದರ (1 ಕೆ.ಜಿಗೆ)</ins></strong></p><ul><li><p>ಬಾದಾಮಿ; ₹920</p></li><li><p>ಗೋಡಂಬಿ; ₹1240</p></li><li><p>ಅಕ್ರೂಟ್;₹ 2600</p></li><li><p>ಪ್ಲೇನ್ ಪಿಸ್ತಾ; ₹2080</p></li><li><p>ಒಣದ್ರಾಕ್ಷಿ; 580</p></li><li><p>ಒಣಖರ್ಜೂರ; ₹320</p></li><li><p>ಪೈನಾ ಬೀಜ; ₹8,000</p></li><li><p>ಜಾಫ್ರನ್ (ಕೇಸರಿ); ₹3.50ಲಕ್ಷ </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷವು ಒಣ ಹಣ್ಣುಗಳು (ಡ್ರೈ ಫ್ರೂಟ್ಸ್), ಖರ್ಜೂರ ಸೇರಿದಂತೆ ಮಸಾಲೆ ಪದಾರ್ಥಗಳ ಸಾಗಾಟದ ಮೇಲೂ ಪರಿಣಾಮ ಬೀರಿದೆ. ಇದರಿಂದ ಇರಾನ್ನಿಂದ ಬೆಂಗಳೂರಿಗೆ ಬರುವ ಒಣ ಹಣ್ಣುಗಳ ಆಮದಿನಲ್ಲಿ ವ್ಯತ್ಯಯವಾಗಿ ದರವೂ ಹೆಚ್ಚಳವಾಗಿದೆ. </p>.<p>ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ದಾಳಿ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳಾದ ಕೊಲ್ಲಿ ದೇಶಗಳ ಮೇಲೆ ಇರಾನ್ ಪ್ರತಿದಾಳಿ ನಡೆಸುತ್ತಿದೆ. ಇದರಿಂದ ಕೊಲ್ಲಿ ದೇಶಗಳಲ್ಲಿ ಮತ್ತು ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಏರ್ಪಟ್ಟಿದೆ. ಅಲ್ಲಿಂದ ಭಾರತಕ್ಕೆ ಒಣಹಣ್ಣುಗಳು ಹಾಗೂ ಖರ್ಜೂರ ಆಮದಿನಲ್ಲಿ ವ್ಯತ್ಯಯವಾಗಿದೆ. ರಂಜಾನ್ ತಿಂಗಳಲ್ಲಿ ಖರ್ಜೂರಕ್ಕೆ ಬೇಡಿಕೆ ಇರುತ್ತದೆ. ಈ ಸಮಯದಲ್ಲಿ ಮುಸ್ಲಿಮರು ಖರ್ಜೂರ ಸೇವಿಸುವ ಮೂಲಕ ಉಪವಾಸ ಮುಕ್ತಾಯಗೊಳಿಸುತ್ತಾರೆ.</p>.<p>‘ರಂಜಾನ್ ಹಬ್ಬದಲ್ಲಿ ಹೆಚ್ಚು ಬೇಡಿಕೆ ಇರುವ ಖರ್ಜೂರ ಹಾಗೂ ಒಣ ಹಣ್ಣುಗಳನ್ನು ಇರಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಲಾಗಿದೆ. ನಮ್ಮ ಬಳಿ ಈಗ 15ರಿಂದ 20 ದಿನಗಳವರೆಗೆ ಆಗುವಷ್ಟು ದಾಸ್ತಾನು ಇದೆ. ಇದು ಖಾಲಿಯಾದರೆ ಸಮಸ್ಯೆ ಆಗಲಿದೆ. ಇರಾನ್ನ ಅಬ್ಬಾಸ್ ಬಂದರಿನ ಮೂಲಕ ಭಾರತಕ್ಕೆ ಖರ್ಜೂರ, ಒಣ ಹಣ್ಣುಗಳು ಸೇರಿದಂತೆ ಮಸಾಲೆ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಈಗ ಅಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಯುತ್ತಿಲ್ಲ’ ಎಂದು ಕಂಟೋನ್ಮೆಂಟ್ ಫ್ರೂಟ್ಸ್ ಆ್ಯಂಡ್ ಡ್ರೈ ಫ್ರೂಟ್ಸ್ ಮರ್ಚೆಂಟ್ ಅಸೋಸಿಯೇಷನ್ನ ಅಧ್ಯಕ್ಷ ಮಹಮ್ಮದ್ ಇದ್ರೀಸ್ ಚೌಧರಿ ‘ಪ್ರಜಾವಾಣಿ’ಗೆ ತಿಳಿಸಿದರು. </p>.<p>‘ಇರಾನ್ನಿಂದ ಪ್ಲೇನ್ ಪಿಸ್ತಾ, ಬಾದಾಮಿ, ಅಂಜೂರ, ಒಣದ್ರಾಕ್ಷಿ, ಪೈನ್ ನಟ್ಸ್ ಹಾಗೂ ಮಸಾಲೆ ಪದಾರ್ಥಗಳನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ. ಇದರ ಜೊತೆಗೆ ಸೌದಿ ಅರೇಬಿಯಾ, ಇರಾಕ್, ಅಫ್ಗಾನಿಸ್ತಾನ, ಜೋರ್ಡನ್ನಿಂದ ಬರುವ ಖರ್ಜೂರ ವಾಲ್ನಟ್ಸ್ಗೆ ನಮ್ಮಲ್ಲಿ ಭಾರಿ ಬೇಡಿಕೆ ಇದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯವಾಗಿ ಬೇಡಿಕೆ ಹೆಚ್ಚಲಿದ್ದು, ಶೇಕಡ 50ರಷ್ಟು ದರ ಏರಿಕೆಯಾಗುವ ಸಾಧ್ಯತೆ ಇದೆ’ ಎಂದು ವಿವರಿಸಿದರು. </p>.<p>‘ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷ ಮುಂದುವರಿದರೆ ಇರಾನ್ನ ಒಂದು ಕೆ.ಜಿ ಅಂಜೂರ ₹1,800, ಮಬರೂಮ್ ಖರ್ಜೂರ ₹3,200, ಒಂದು ಗ್ರಾಂ ಕೇಸರಿಗೆ ₹350, ಏಲಕ್ಕಿ ₹3,800, ಕರಿಮೆಣಸು ₹1,800ರವರೆಗೆ ಹೆಚ್ಚಳವಾಗಲಿದೆ. ಇವುಗಳ ಬೆಲೆ ಸದ್ಯಕ್ಕೆ ಕಡಿಮೆ ಇದೆ’ ಎಂದು ವಿವರಿಸಿದರು. </p>.<div><blockquote>ಈಗಾಗಲೇ ಸರಬರಾಜು ಆಗಿರುವ ಒಣ ಹಣ್ಣುಗಳನ್ನು ಮುಂಬೈ ಹಾಗೂ ದೆಹಲಿಯ ಮಧ್ಯವರ್ತಿಗಳು ದಾಸ್ತಾನು ಇಟ್ಟುಕೊಂಡಿದ್ದಾರೆ. ಪೂರೈಕೆ ಕಡಿಮೆಯಾಗಿರುವ ಸಂದರ್ಭವನ್ನು ಬಳಸಿಕೊಂಡು ಅವರು ಬೆಲೆ ಏರಿಕೆ ಮಾಡಲಿದ್ದಾರೆ.</blockquote><span class="attribution">– ಮಹಮ್ಮದ್ ಇದ್ರೀಸ್ ಚೌಧರಿ, ಕಂಟೋನ್ಮೆಂಟ್ ಫ್ರೂಟ್ಸ್ ಆ್ಯಂಡ್ ಡ್ರೈ ಫ್ರೂಟ್ಸ್ ಮರ್ಚೆಂಟ್ ಅಸೋಸಿಯೇಷನ್ನ ಅಧ್ಯಕ್ಷ</span></div>.<p><strong><ins>ಖರ್ಜೂರದ ದರ (1 ಕೆ.ಜಿಗೆ)</ins></strong></p><ul><li><p>ಮುಜಫಿರತ್ ಖರ್ಜೂರ; ₹200</p></li><li><p>ಕಲ್ಮಿ ಖರ್ಜೂರ; ₹700</p></li><li><p>ಸುಗಾಯಿ ಖರ್ಜೂರ; ₹700</p></li><li><p>ಅಜೂವಾ ಖರ್ಜೂರ; ₹1200</p></li><li><p>ಮಬರೂಮ್ ಖರ್ಜೂರ; ₹1200</p></li></ul><p><strong><ins>ಡ್ರೈಫ್ರೂಟ್ಸ್ ದರ (1 ಕೆ.ಜಿಗೆ)</ins></strong></p><ul><li><p>ಬಾದಾಮಿ; ₹920</p></li><li><p>ಗೋಡಂಬಿ; ₹1240</p></li><li><p>ಅಕ್ರೂಟ್;₹ 2600</p></li><li><p>ಪ್ಲೇನ್ ಪಿಸ್ತಾ; ₹2080</p></li><li><p>ಒಣದ್ರಾಕ್ಷಿ; 580</p></li><li><p>ಒಣಖರ್ಜೂರ; ₹320</p></li><li><p>ಪೈನಾ ಬೀಜ; ₹8,000</p></li><li><p>ಜಾಫ್ರನ್ (ಕೇಸರಿ); ₹3.50ಲಕ್ಷ </p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>