ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹80 ಕೋಟಿ‌ ಮೌಲ್ಯದ ತಿಮಿಂಗಿಲ ವಾಂತಿ 'ಅಂಬರ್‌ ಗ್ರೀಸ್' ಜಪ್ತಿ

Last Updated 10 ಆಗಸ್ಟ್ 2021, 5:12 IST
ಅಕ್ಷರ ಗಾತ್ರ

ಬೆಂಗಳೂರು: ಪುರಾತನ ವಸ್ತುಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ಐವರನ್ನು ಸಿಸಿಬಿ‌ ಪೊಲೀಸರು ಬಂಧಿಸಿದ್ದು, ಅವರಿಂದ ₹ 80 ಕೋಟಿ‌ ಮೌಲ್ಯದ ಅಂಬರ್ ಗ್ರೀಸ್ ಗಟ್ಟಿಯನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನ ಮಜೀಬ್ ಪಾಷಾ, ಮೊಹಮ್ಮದ್ ಮುನ್ನಾ, ಗುಲಾಬ್ ಚಂದ್, ಸಂತೋಷ್ ಹಾಗೂ ರಾಯಚೂರಿನ ಜಗನ್ನಾಥಾಚಾರ್ ಬಂಧಿತರು.

'ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿದ್ದ ಆರೋಪಿಗಳು, ತಮ್ಮ ಬಳಿ ಪುರಾತನ ವಸ್ತುಗಳನ್ನು ಇಟ್ಟುಕೊಂಡಿದ್ದರು. ಈ‌ ಬಗ್ಗೆ‌ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರನ್ನು ಬಂಧಿಸಲಾಗಿದೆ' ಎಂದು ಸಿಸಿಬಿ ಪೊಲೀಸರು ಹೇಳಿದರು.

'ಅಂಬರ್ ಗ್ರೀಸ್ ಎಂಬುದು ಸಮುದ್ರದಲ್ಲಿ ಸಿಗುವ ತಿಮಿಂಗಿಲು ವಾಂತಿಯಾಗಿದ್ದು, ಇದನ್ನು‌ ಸುಗಂಧ ದ್ರವ್ಯ ಹಾಗೂ ಮಾದಕವಸ್ತು ತಯಾರಿಕೆಯಲ್ಲಿ‌ ಬಳಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದಕ್ಕೆ ‌ಬೇಡಿಕೆ‌ ಹೆಚ್ಚಿದೆ' ಎಂದೂ ತಿಳಿಸಿದರು.

'ಬ್ರಿಟಿಷ್ ಈಸ್ಟ್ ಇಂಡಿಯಾ‌ ಕಂಪನಿಯ ರೆಡ್ ಮರ್ಕ್ಯೂರಿ ತಾಮ್ರದ ಬಾಟಲಿಗಳು, ಸ್ಟಿಮ್ ಪ್ಯಾನ್ ಸಹ ಆರೋಪಿಗಳ‌ ಬಳಿ ಸಿಕ್ಕಿವೆ' ಎಂದೂ ಪೊಲೀಸರು ಹೇಳಿದರು.

ಬಂಧಿತರಿಂದ ವಶಪಡಿಸಿಕೊಂಡ ಅಂಬರ್ ಗ್ರೀಸ್ ಗಟ್ಟಿ
ಬಂಧಿತರಿಂದ ವಶಪಡಿಸಿಕೊಂಡ ಅಂಬರ್ ಗ್ರೀಸ್ ಗಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT