ಸೆಂಟ್ರಲ್ ಕಾಲೇಜು ರಸ್ತೆಯುದ್ದಕ್ಕೂ ಫುಟ್ಪಾತ್ನಲ್ಲಿ ದೊಡ್ಡ ಗುಂಡಿಗಳಾಗಿವೆ. ಈ ರಸ್ತೆಯಲ್ಲಿ ನಡೆಯುತ್ತಿರುವ ವೈಟ್ಟಾಪಿಂಗ್ ಕಾಮಗಾರಿ ವಿಳಂಬವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ರಸ್ತೆ ಮಧ್ಯೆ ಓಡಾಡುವುದು ಅನಿವಾರ್ಯವಾಗಿದೆ. ಪಾದಚಾರಿ ಮಾರ್ಗ ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಬೇಕು. ವೈಟ್ಟಾಪಿಂಗ್ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು– ಅಪೂರ್ವ, ಜಿಲ್ಲಾಧ್ಯಕ್ಷೆ ಎಐಡಿಎಸ್ಒ ಬೆಂಗಳೂರು ಜಿಲ್ಲಾ ಸಮಿತಿ
ಪಾದಚಾರಿ ಮಾರ್ಗದಲ್ಲಿ ಅಲ್ಲಲ್ಲಿ ಗುಂಡಿಗಳಾಗಿವೆ. ಜನರು ಗಡಿಬಿಡಿಯಲ್ಲಿ ಅರಿವಿಲ್ಲದೇ ಗುಂಡಿಗಳಲ್ಲಿ ಕಾಲಿಟ್ಟು ಬೀಳುತ್ತಾರೆ. ರಸ್ತೆ ಕಾಮಗಾರಿ ಬೇಗ ಮುಗಿಸಬೇಕು. ಅದಕ್ಕೂ ಮುನ್ನ ಪಾದಚಾರಿ ಮಾರ್ಗದ ಗುಂಡಿಗಳಿಗೆ ಸ್ಲ್ಯಾಬ್ ಜೋಡಿಸಿ ಅಗತ್ಯವಿದ್ದರೆ ಬೇರೆ ಎಲ್ಲಾದರೂ ಓಪನ್ ಮಾಡಿಕೊಳ್ಳಲಿ.- ಪರಸಪ್ಪ ಮಾಳಗಿ ಲಿಂಗಾನಯಕನಹಳ್ಳಿ
ನಾನು ನಿತ್ಯ ವಿಧಾನಸೌಧ ಹೈಕೋರ್ಟ್ಗೆ ಹೋಗಲು ಇದೇ ರಸ್ತೆ ಬಳಸುತ್ತೇನೆ. ಪಾದಚಾರಿ ಮಾರ್ಗ ಹಾಳಾಗಿದೆ. ರಸ್ತೆಯನ್ನೂ ಅಗೆದಿದ್ದಾರೆ. ವಯಸ್ಸಾದವರು ಓಡಾಡುವುದು ಕಷ್ಟ. ರಸ್ತೆ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಪೂರ್ಣಗೊಳಿಸಿ ಅಪಾಯ ತಪ್ಪಿಸಬೇಕು. –ಅಂಜನ್ ಕುಮಾರ್ ವಡ್ನಾಳ್ –––– ಪಾದಚಾರಿ ಮಾರ್ಗದಲ್ಲಾಗಿರುವ ಗುಂಡಿಗಳನ್ನು ಮುಚ್ಚಿರುವ ಬ್ಯಾರಿಕೇಡ್ಗಳು ಭದ್ರವಿಲ್ಲ. ಅವುಗಳನ್ನು ತೆಗೆದು ಸ್ಲ್ಯಾಬ್ ಅಳವಡಿಸಬೇಕು. ಇಲ್ಲದಿದ್ದರೆ ಅಪಾಯ ಸಂಭವಿಸುತ್ತದೆನಮ್ ಋಷಿ, ಸಿನಿಮಾ ನಿರ್ದೇಶಕ
ಪ್ರಸ್ತುತ ಯುಟಿಲಿಟಿ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಅದು ಒಂದು ತಿಂಗಳೊಳಗೆ ಮುಗಿಯಲಿದೆ. ಇನ್ನೊಂದು ತಿಂಗಳೊಳಗೆ ವೈಟ್ಟಾಪಿಂಗ್ ನಂತರ ಒಂದು ತಿಂಗಳಲ್ಲಿ ಪಾದಚಾರಿ ಮಾರ್ಗ ಪೂರ್ಣಗೊಳ್ಳುತ್ತದೆ. ಮೂರು ತಿಂಗಳೊಳಗೆ ಎಲ್ಲ ಕಾಮಗಾರಿಗಳೂ ಪೂರ್ಣಗೊಳ್ಳುತ್ತವೆ.– ಎಂ.ಲೋಕೇಶ್ ಮುಖ್ಯ ಎಂಜಿನಿಯರ್ ಬಿಬಿಎಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.