ಮುಖಂಡ ವೇಣುಗೋಪಾಲ ಜೇವರ್ಗಿ ಮಾತನಾಡಿ, ‘ನಗರದಲ್ಲಿ ಹಂದಿಗಳ ಹಾವಳಿ ವ್ಯಾಪಕವಾಗಿದೆ. ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಹಣ್ಣಿನ ಅಂಗಡಿ, ಹೊಟೇಲ ಸೇರಿದಂತೆ ಸಂದಿ, ಗೊಂದಿ, ಗಲ್ಲಿ ಗಲ್ಲಿ ಒಳಗೊಂಡಂತೆ ಎಲ್ಲೆಂದರಲ್ಲಿ ಹಂದಿಗಳು ವಾಸವಾಗಿವೆ. ಮನೆ ಬಾಗಿಲು ತೆಗೆದರೆ ಸಾಕು ಮನೆಯಲ್ಲಿ ನುಗ್ಗಿ ಬಿಡುತ್ತವೆ. ಹಂದಿಗಳ ವೈರಸ್ನಿಂದ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ. ಕಾರಣ ಹಂದಿಗಳನ್ನು ದೂರ ಸಾಗಿಸಬೇಕು’ ಎಂದು ಒತ್ತಾಯಿಸಿದರು.