ದೂರ ಮಾಡಿದ್ದಕ್ಕೆ ಕೊಲೆ: ‘ಆರೋಪಿಯಿಂದ ಅಂತರ ಕಾಯ್ದುಕೊಂಡಿದ್ದ ದೀಪಾ, ಕೆಲ ದಿನಗಳಿಂದ ಮೊಬೈಲ್ ಕರೆ ಹಾಗೂ ಸಂದೇಶಗಳಿಗೆ ಸ್ಪಂದಿಸುತ್ತಿರಲಿಲ್ಲ. ಇದರಿಂದ ಸಿಟ್ಟಾದ ಆರೋಪಿ, ದೀಪಾ ಅವರನ್ನು ಜೂನ್ 9ರಂದು ಯಶವಂತಪುರ ಬಳಿಯ ವಸತಿಗೃಹದ ಕೊಠಡಿಗೆ ಕರೆಸಿಕೊಂಡಿದ್ದ. ಅಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದ’ ಎಂದು ಪೊಲೀಸರು ತಿಳಿಸಿದರು.