‘ದಾಸೇಗೌಡ ಹಾಗೂ ಜಯಲಕ್ಷ್ಮಿ ಮದುವೆಯಾಗಿ 16 ವರ್ಷಗಳು ಕಳೆದಿದ್ದವು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಫಾರ್ಮ್ ಹೌಸ್ನಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಜಯಲಕ್ಷ್ಮಿಗೆ ರಾಜೇಶ್ ಎಂಬಾತ ಪರಿಚಯವಾಗಿದ್ದ. ದಾಸೇಗೌಡ ಮನೆಯಲ್ಲಿ ಇಲ್ಲದಿದ್ದಾಗ ರಾಜೇಶ್ ಮನೆಗೆ ಬಂದುಹೋಗುತ್ತಿದ್ದ. ಇದೇ ವಿಷಯಕ್ಕೆ ಮನೆಯಲ್ಲಿ ದಂಪತಿ ನಡುವೆ ಗಲಾಟೆ ನಡೆಯುತ್ತಿತ್ತು. ಅನೈತಿಕ ಸಂಬಂಧಕ್ಕೆ ದಾಸೇಗೌಡ ಅಡ್ಡಿಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಕೊಲೆಗೆ ಇಬ್ಬರೂ ಸಂಚು ರೂಪಿಸಿದ್ದರು’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.