ಯಾವುದೇ ತಿರುವು, ಶಾಲೆ, ಊರು ಇಲ್ಲದ ಕಡೆಯೂ ಅನವಶ್ಯಕವಾಗಿ ರಸ್ತೆ ಉಬ್ಬು ಹಾಕಿದ್ದಾರೆ. ಅಗತ್ಯ ಇಲ್ಲದೆಡೆ ಅವೈಜ್ಞಾನಿಕವಾಗಿರುವ ರಸ್ತೆ ಉಬ್ಬುಗಳಿಗೆ ಕೆಂಪು ರಿಫ್ಲೆಕ್ಟರ್ ಅಳವಡಿಸಬೇಕು ಎಂದು ಜನರು ಮನವಿ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಲು ಹೊಳೆನರಸೀಪುರದ ಜನಸ್ಪಂದನ ವೇದಿಕೆ ಸದಸ್ಯರು ಚಿಂತನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.