ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಗಳವು; ಮೆಟ್ಟಿಲಿನಿಂದ ಬಿದ್ದು ಮಹಿಳೆಗೆ ಗಾಯ

Last Updated 13 ಜನವರಿ 2020, 10:29 IST
ಅಕ್ಷರ ಗಾತ್ರ

ಬೆಂಗಳೂರು: ಆರ್.ಟಿ.ನಗರ ಠಾಣೆ ವ್ಯಾಪ್ತಿಯ ಗಿಡ್ಡಪ್ಪ ಬ್ಲಾಕ್‌ನಲ್ಲಿರುವ ಮನೆಯ ಮೆಟ್ಟಿಲು ಹತ್ತುತ್ತಿದ್ದಾಗಲೇ ನಿರ್ಮಲಾ (58) ಎಂಬುವರ ಚಿನ್ನದ ಸರವನ್ನು ಕಿತ್ತುಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ. ಕೃತ್ಯದ ವೇಳೆಯೇ ಮೆಟ್ಟಿಲು ಮೇಲಿದ್ದ ಬಿದ್ದು ನಿರ್ಮಲಾ ಗಾಯಗೊಂಡಿದ್ದಾರೆ.

‘ಜ. 9ರಂದು ಮಧ್ಯಾಹ್ನ ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ ನಿರ್ಮಲಾ, ಮನೆಯ ಎರಡನೇ ಮಹಡಿ ಮೆಟ್ಟಿಲು ಹತ್ತುತ್ತಿದ್ದರು. ಹೆಲ್ಮೆಟ್ ಧರಿಸಿ ಸ್ಥಳಕ್ಕೆ ಬಂದಿದ್ದ ಅಪರಿಚಿತ, ನಿರ್ಮಲಾ ಅವರ 40 ಗ್ರಾಂ ತೂಕದ ಸರ ಕಿತ್ತುಕೊಂಡು ಪರಾರಿಯಾದ. ಸರವನ್ನು ಜೋರಾಗಿ ಎಳೆದಿದ್ದರಿಂದ ನಿರ್ಮಲಾ ಮೆಟ್ಟಿಲಿನಿಂದ ಬಿದ್ದು ಗಾಯಗೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಸರಗಳವು ಯತ್ನ: ಹೊರವರ್ತುಲ ರಸ್ತೆಯ ಐಟಿಐ ಲೇಔಟ್ ಬಳಿ ಶಾಂತಾ ಎಂಬುವರ ಸರ ಕಸಿದುಕೊಳ್ಳಲು ಯತ್ನಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

‘ನಾಯಂಡಹಳ್ಳಿ ನಿವಾಸಿ ಶಾಂತಾ ಭಾನುವಾರ ಬೆಳಿಗ್ಗೆ 8 ಗಂಟೆಗೆ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಬಂದ ದುಷ್ಕರ್ಮಿಗಳು ಸರ ಕಸಿಯಲು ಯತ್ನಿಸಿದ್ದರು. ತಪ್ಪಿಸಿಕೊಂಡು ದೂರ ಓಡಿಹೋಗಿದ್ದ ಶಾಂತಾ, ಕೂಗಾಡಿ ಜನರನ್ನು ಸೇರಿಸಿದ್ದರು. ಹೆದರಿದ ಆರೋಪಿಗಳು ಸ್ಥಳದಿಂದ ಪರಾರಿಯಾದರು’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT