ಚೆನ್ನೈ: ಇಲ್ಲಿನ ಟಿಐ ಮುರುಗಪ್ಪ ಮೈದಾನದಲ್ಲಿ ಭಾನುವಾರ ನಡೆಯಲಿರುವ ವಿಜಯ್ ಹಜಾರೆ ಟ್ರೋಫಿ ‘ಸಿ‘ ಗುಂಪಿನ ಲೀಗ್ ಪಂದ್ಯದಲ್ಲಿ ತಮಿಳುನಾಡು ತಂಡವನ್ನು ಬಿ.ಅಪರಾಜಿತ್ ಮುನ್ನಡೆಸಲಿದ್ದಾರೆ ಎಂದು ತಿಳಿಸಲಾಗಿದೆ. ಈ ಪಂದ್ಯದಲ್ಲಿ ಆಂಧ್ರಪ್ರದೇಶ ತಂಡದ ಜೊತೆಗೆ ಮುಖಾಮುಖಿಯಾಗಲಿದೆ.
‘ನಾಯಕ ವಿಜಯ್ ಶಂಕರ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಅಪರಾಜಿತ್ ತಂಡವನ್ನು ಮುನ್ನಡೆಸಲಿದ್ದಾರೆ’ ಎಂದು ತಮಿಳುನಾಡು ಕ್ರಿಕೆಟ್ ಮಂಡಳಿ ತಿಳಿಸಿದೆ.
ಶಂಕರ್ ಜಾಗವನ್ನು ಆಫ್ಸ್ಪಿನ್ನರ್ ಮಲೊಲನ್ ರಂಗರಾಜನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.