ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ಪತ್ನಿ ಹತ್ಯೆ; ಕೊಳೆತ ಸ್ಥಿತಿಯಲ್ಲಿ‌ ಶವ ಪತ್ತೆ

Last Updated 21 ಏಪ್ರಿಲ್ 2022, 4:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ವನಜಾಕ್ಷಿ (31) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಈ ಸಂಬಂಧ ಅವರ ಪತಿ ಅಶೋಕನನ್ನು (37) ಪೊಲೀಸರು ಬಂಧಿಸಿದ್ದಾರೆ.

'ಏಪ್ರಿಲ್ 17ರಂದು ರಾತ್ರಿ ಕೊಲೆ ನಡೆದಿದೆ. ಕೊಳೆತ ಸ್ಥಿತಿಯಲ್ಲಿ‌ ಮೃತದೇಹ ಗುರುವಾರ ಪತ್ತೆ ಆಗಿದೆ' ಎಂದು ಪೊಲೀಸರು ತಿಳಿಸಿದರು.

'ಕಾರು ಚಾಲಕ‌ನಾಗಿ‌ ಕೆಲಸ‌ ಮಾಡುತ್ತಿದ್ದ ಅಶೋಕ, ಕೆಲ ವರ್ಷಗಳ ಹಿಂದೆ ವನಜಾಕ್ಷಿ ಅವರನ್ನು ಮದುವೆಯಾಗಿದ್ದ. ಕಾವೇರಿಪುರದಲ್ಲಿ ದಂಪತಿ ನೆಲೆಸಿದ್ದರು.'

'ಕೌಟುಂಬಿಕ ಕಾರಣಕ್ಕಾಗಿ ದಂಪತಿ‌ ನಡುವೆ ಆಗಾಗ ಜಗಳ‌ ಆಗುತ್ತಿತ್ತು. ಏಪ್ರಿಲ್ 17ರಂದು ಜಗಳ‌ ವಿಕೋಪಕ್ಕೆ ಹೋಗಿತ್ತು. ಪತ್ನಿಯನ್ನು ‌ಕೊಂದಿದ್ದ ಅಶೋಕ, ಮನೆಯೊಳಗೆ ಮೃತದೇಹವಿಟ್ಟು ಬಾಗಿಲು ಹಾಕಿಕೊಂಡು ಪರಾರಿಯಾಗಿದ್ದ. ಮನೆಯಿಂದ ದುರ್ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಮನೆಗೆ ಹೋಗಿ ಪರಿಶೀಲಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ' ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT