ಅ. 30ರಂದು ಮಗ ಸುಮಂತ್, ಉಲ್ಲಾಳದಲ್ಲಿರುವ ಅಜ್ಜಿ ಮನೆಗೆ ಹೋಗಿದ್ದರು. ರಾತ್ರಿ 10ರ ಸುಮಾರಿಗೆ ಮಗನಿಗೆ ಕರೆ ಮಾಡಿದ್ದ ಅಂಜನಾ, ‘ನಾನು ಸಾಯುತ್ತಿದ್ದೇನೆ. ನನ್ನ ಚಿತೆಗೆ ನೀನೇ ಬೆಂಕಿ ಇಡಬೇಕು’ ಎಂದು ಹೇಳಿ ಕರೆ ಕಡಿತಗೊಳಿಸಿದ್ದರು. ಗಾಬರಿ ಗೊಂಡಿದ್ದ ಮಗ ಮನೆಗೆ ಬಂದಿದ್ದರು. ಮನೆಯ ಕೊಠಡಿಯಲ್ಲೇ ತಾಯಿಯ ಮೃತದೇಹ ಕಂಡಿದ್ದರು’ ಎಂದು ಪ್ರಕರಣ ದಾಖಲಿಸಿಕೊಂಡಿರುವ ಚಂದ್ರಾಲೇಔಟ್ ಠಾಣೆ ಪೊಲೀಸರು ತಿಳಿಸಿದ್ದಾರೆ.