ಹೆಚ್ಚುವರಿ ಒಳಚರಂಡಿ ಮತ್ತು ನೀರಿನ ಕೊಳವೆ ಅಳವಡಿಸುವ ಮಾರ್ಗದಲ್ಲಿ ಗಟ್ಟಿ ಬಂಡೆ ಸಿಕ್ಕಿದ್ದರಿಂದ ಅದನ್ನು ಒಡೆಯುವ ಕಾಮಗಾರಿಯೂ ವಿಳಂಬವಾಗಿದೆ. ರಾಜಕಾಲುವೆ ಮತ್ತು ಮೋರಿ ಕೂಡ ಶಿಥಿಲಗೊಂಡಿದ್ದು, ಮರು ನಿರ್ಮಾಣ ಆಗಬೇಕಿದೆ. ಬಿಬಿಎಂಪಿ ರಾಜಕಾಲುವೆ ವಿಭಾಗದಿಂದ ದುರಸ್ತಿ ಪಡಿಸಲಾಗುತ್ತಿದೆ. ಮಳೆಯಿಂದ ಕಾಮಗಾರಿ ವಿಳಂಬವಾಗಿದ್ದು, ಶೀಘ್ರ ಪೂರ್ಣಗೊಳಿಸಿ ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಕೋರಿದ್ದಾರೆ.