‘ಬುಧವಾರ, ಗುರುವಾರ ವಿಚಾರಣೆಗೆ ಹಾಜರಾಗಿದ್ದ ಪೌಲ್ ಕೆಲ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದ್ದಾರೆ. ಅದರ ಪರಿಶೀಲನೆ ನಡೆಸಲಾಗುತ್ತಿದ್ದು, ಮತ್ತಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿ ಪೌಲ್ ಅವರನ್ನು ವಿಚಾರಣೆಗೆ ಕರೆಯಬೇಕಿದೆ. ನೇಮಕಾತಿ ವಿಭಾಗದ ಡಿವೈಎಸ್ಪಿ ಶಾಂತಕುಮಾರ್ ಹಾಗೂ ಇತರೆ ನೌಕರರ ಹೇಳಿಕೆಯ ಜೊತೆ ಪೌಲ್ ಹೇಳಿಕೆ ಹೋಲಿಕೆ ಮಾಡಲಾಗುತ್ತಿದೆ. ತಮ್ಮದೇನೂ ತಪ್ಪಿಲ್ಲವೆಂದು ಎಡಿಜಿಪಿ ಹೇಳುತ್ತಿದ್ದಾರೆ. ಕೆಲ ಪುರಾವೆಗಳು ಅವರ ಮೇಲೆ ಅನುಮಾನ ಬರುವಂತಿದೆ. ಇನ್ನೊಮ್ಮೆ ವಿಚಾರಣೆ ನಡೆಸಿದ ಬಳಿಕವೇ ಪೌಲ್ ಪಾತ್ರದ ಬಗ್ಗೆ ತಿಳಿಯಲಿದೆ’ ಎಂದು ಮೂಲಗಳು ತಿಳಿಸಿವೆ.