‘ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದು ಜನತೆಗೆ ವಚನ ಕೊಟ್ಟ ಪ್ರಧಾನಿ ಮೋದಿ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಅವರು ಮಾತು ಕೊಟ್ಟಾಗ ಇದ್ದಷ್ಟು ಉದ್ಯೋಗವೂ ಈಗ ಉಳಿದಿಲ್ಲ ಎಂಬುದು ಅಂಕಿ ಅಂಶ ಹೇಳುತ್ತದೆ, ಇದು ದ್ರೋಹವಲ್ಲವೆ’ ಎಂದು ಪ್ರಶ್ನಿಸಿದ ಅವರು, ‘ನಿರುದ್ಯೋಗ ಸಮಸ್ಯೆಯಿಂದಾಗಿ ಯುವಕರು ದಾರಿ ತಪ್ಪಿ ಮಚ್ಚು, ಬಂದೂಕು ಹಿಡಿದು ಹಿಂಸಾತ್ಮಕ ದಾರಿ ತುಳಿಯುತ್ತಿದ್ದಾರೆ. ಇದಕ್ಕೆಲ್ಲಾ ಆಳುವವರ ಕೃಪೆ ಇರಬಹುದೇನೊ ಎಂಬ ಅನುಮಾನ ಕಾಡುತ್ತಿದೆ’ ಎಂದರು.