ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ, ‘ರಾಜ್ಯದಲ್ಲಿ ನಾನು ಅಚಾನಕ್ಕಾಗಿ ಮುಖ್ಯಮಂತ್ರಿ ಆದಾಗ ಅನಂತಕುಮಾರ್ ಅವರು ನನಗೆ ಸ್ಥಿತಃಪ್ರಜ್ಞೆಯನ್ನು ಕಾಪಾಡಿಕೊಳ್ಳುವಂತೆ ಸಲಹೆ ನೀಡಿದ್ದರು. ನಗರದಲ್ಲಿ ಪ್ರಾರಂಭವಾಗಿರುವ ಸೆಂಟರ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆಗೆ (ಸಿಪೆಟ್)ಅನಂತಕುಮಾರ್ ಹೆಸರನ್ನು ಇಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ’ ಎಂದರು.