‘ತಿಪ್ಪೆಗೊಬ್ಬರಕ್ಕೆ ಸಾಕಷ್ಟು ಬೇಡಿಕೆಯಿರುವುದರಿಂದ ನಿಮ್ಮ ಮನೆಗಳಲ್ಲಿ ಕಸವನ್ನು ವಿಂಗಡ ಣೆಮಾಡಿ ನೀಡಿದರೆ, ಹಸಿಕಸವನ್ನು ತಿಪ್ಪೆಗೊಬ್ಬರವನ್ನಾಗಿ ಪರಿವರ್ತಿಸಬಹುದಾಗಿದೆ. ಒಣಕಸವನ್ನು ಮರುಬಳಕೆಮಾಡುವ ಸಲುವಾಗಿ ಕಾರ್ಖಾನೆಗಳು ಕೊಂಡುಕೊಳ್ಳಲು ತಯಾರಿವೆ. ಜನರು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದರಿಂದ ಯಾವುದೂ ತ್ಯಾಜ್ಯ ಕಸವಾಗದೆ ಎಲ್ಲವೂ ಉಪಯೋಗಕ್ಕೆ ಬರಲಿದ್ದು, ಇದರಿಂದ ಗ್ರಾಮಗಳು ಸ್ವಚ್ಚವಾಗಿರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.