ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಅನಂತಪುರ ಗೇಟ್ವರೆಗೆ ಟಸ್ಕರ್ ವಿದ್ಯುತ್ ದೀಪ ಅಳವಡಿಸಲಾಗಿದ್ದು, ಈ ದೀಪಗಳು ಅಂದವಾದ ಬೆಳಕು ನೀಡುವುದರ ಜೊತೆಗೆ ಅಲಂಕಾರಿ ಕವಾಗಿ ಕಾಣುವ ಮೂಲಕ ಜನರ ಗಮನ ಸೆಳೆಯುತ್ತಿವೆ. ಅಟ್ಟೂರು ಕೆರೆ ಯಲ್ಲಿ 2 ಕಿ.ಮೀ ನಡಿಗೆಪಥ, ವಿದ್ಯುತ್ ದೀಪ ಮತ್ತು ಎಫ್.ಎಂ.ರೇಡಿಯೊ ಹಾಗೂ ಸಂದೀಪ್ ಉನ್ನಿಕೃಷ್ಣನ್ ರಸ್ತೆ ಯಲ್ಲಿ ಮರಗಳಿಗೆ ಅಳವಡಿಸಿರುವ ಶೇಡ್ ವಿದ್ಯುತ್ ದೀಪಗಳನ್ನು ಉದ್ಘಾಟಿಸಲಾಯಿತು. ಕೋಗಿಲು ವೃತ್ತದಲ್ಲಿ ‘ಮೇಕ್-ಇನ್-ಇಂಡಿಯಾ’ ಪರಿಕಲ್ಪನೆಯಡಿ ನಿರ್ಮಿಸಿರುವ ಅಲಂಕಾರಿಕ ಎತ್ತಿನ ಬಂಡಿಯ ಪ್ರತಿಕೃತಿಯನ್ನು ಅನಾವರಣಗೊಳಿಸಲಾಯಿತು. ಈ ವೇಳೆ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ‘₹8.50 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಎಲ್ಲ ಸೌಲಭ್ಯಗಳಿಗೆ ಚಾಲನೆ ನೀಡಲಾಗಿದೆ’ ಎಂದರು.