‘ಆಶೌಚದ ಅವಧಿಯ ಕಾರಣಕ್ಕಾಗಿ ಎನ್.ವೆಂಕಟಾಚಾರ್ ಅವರ ಸ್ಥಾನದಲ್ಲಿನಿವೃತ್ತ ಪ್ರಾಂಶುಪಾಲರೂ ಆದ 63 ವರ್ಷದ ಭಾಷ್ಯಂ ಸ್ವಾಮಿ ಅಲಿಯಾಸ್ ಅವರನ್ನು ತಾತ್ಕಾಲಿಕ ಅರ್ಚಕರನ್ನಾಗಿ ನೇಮಿಸಲಾಗಿತ್ತು. ಆದರೆ ಅವರಿಗೆ ಈ ಸ್ಥಾನ ನಿಭಾಯಿಸುವ ಪ್ರಾಥಮಿಕ ಅರ್ಹತೆಗಳಿಲ್ಲ. ಈ ಅಂಶವು ಸಂಬಂಧಿಸಿದ ಅಧಿಕಾರಿಗಳ ಸಭೆಯಲ್ಲಿ ತಾತ್ಕಾಲಿಕ ನೇಮಕಕ್ಕೂ ಮೊದಲು ಪ್ರಸ್ತಾಪವಾಗಿತ್ತು. ಆದರೂ, ಮುಜರಾಯಿ ಇಲಾಖೆ ಕಾರ್ಯದರ್ಶಿ ಇವರನ್ನು ನೇಮಕ ಮಾಡಿರುವ ಆದೇಶ ಕಾನೂನುಬಾಹಿರವಾಗಿದೆ. ಆದ್ದರಿಂದ, ಈ ನೇಮಕದ ಆದೇಶವನ್ನು ರದ್ದುಗೊಳಿಸಬೇಕು’ ಎಂದು ಕೋರಿದರು.ಈ ವಾದವನ್ನು ಎತ್ತಿಹಿಡಿದ ನ್ಯಾಯಪೀಠ ಅರ್ಜಿಯನ್ನು ಮಾನ್ಯ ಮಾಡಿದೆ.