‘ಬಂಧಿತ ಆರೋಪಿಗಳು, ಇಂದಿರಾನಗರ ಹಾಗೂ ಬೊಮ್ಮನಹಳ್ಳಿಯಲ್ಲಿ ಪ್ರತ್ಯೇಕವಾಗಿ ಹೋಟೆಲ್ ನಡೆಸುತ್ತಿದ್ದರು. ಕೋವಿಡ್ಗೂ ಮುನ್ನ ಹೋಟೆಲ್ ವ್ಯಾಪಾರ ಚೆನ್ನಾಗಿತ್ತು. ಕೋವಿಡ್ ನಂತರ ವ್ಯಾಪಾರವೇ ಇರಲಿಲ್ಲ. ನಷ್ಟ ಅನುಭವಿಸಿದ್ದ ಆರೋಪಿಗಳು, ಆರ್ಥಿಕವಾಗಿ ಕುಗ್ಗಿದ್ದರು. ಆರಂಭದಲ್ಲಿ ಮೊಬೈಲ್ ಆ್ಯಪ್ಗಳ ಮೂಲಕ ಸಾಲ ಪಡೆದಿದ್ದ ಅವರು, ಸಾಲದ ಕಂತು ಪಾವತಿಸಲು ಸಾಧ್ಯವಾಗದೇ ಮತ್ತಷ್ಟು ತೊಂದರೆಗೆ ಸಿಲುಕಿದ್ದರು’ ಎಂದೂ ತಿಳಿಸಿದರು.