<p><strong>ಬೆಂಗಳೂರು</strong>: ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ(ವೈಎಸ್ಎಸ್) ಆಯೋಜಿಸಿದ್ದ ಸಮಾರಂಭದಲ್ಲಿ ಪರಮಹಂಸ ಯೋಗಾನಂದರು ಬೋಧಿಸಿದ್ದ ವೈಜ್ಞಾನಿಕ ಧ್ಯಾನದ ತಂತ್ರಗಳು ಹಾಗೂ ಯಶಸ್ವಿ ಜೀವನದ ಪಾಠಗಳನ್ನು ಕನ್ನಡದಲ್ಲಿ ಮಂಗಳವಾರ ಬಿಡುಗೊಳಿಸಲಾಯಿತು. </p>.<p>ವೈಎಸ್ಎಸ್ ಉಪಾಧ್ಯಕ್ಷ ಸ್ವಾಮಿ ಸ್ಮರಣಾನಂದ ಗಿರಿ ಮಾತನಾಡಿ, ‘ಮಾನಸಿಕ ಒತ್ತಡ ಮತ್ತು ಅಶಾಂತಿಯ ವಾತಾವರಣ ಇರುವ ಈಗಿನ ಸಂದರ್ಭದಲ್ಲಿ ಧ್ಯಾನದ ತಂತ್ರಗಳು ಅವಶ್ಯಕವಾಗಿವೆ. ಮಕ್ಕಳು, ಹಿರಿಯರು ಪ್ರಾಚೀನ ಯೋಗದ ತಂತ್ರಗಳ ಮೂಲಕ ಮನಸ್ಸನ್ನು ನಿಯಂತ್ರಿಸಿ, ಜೀವನದಲ್ಲಿ ಶಾಂತಿ, ಸೌಹಾರ್ದ, ಸಂತೋಷ, ಏಕಾಗ್ರತೆ ಸಾಧಿಸಬಹುದು’ ಎಂದರು. </p>.<p>‘ಯೋಗದ ಸತ್ಸಂಗ ಪಾಠಗಳನ್ನು ಹಂತ ಹಂತವಾಗಿ ಕಲಿಸುವ ಗೃಹ ಅಧ್ಯಯನ ಕೋರ್ಸ್ ಇದಾಗಿದೆ. ಪರಮಹಂಸ ಯೋಗಾನಂದರು ಬೋಧಿಸಿದ ಪ್ರಾಯೋಗಿಕ ಧ್ಯಾನ ವಿಧಾನಗಳು ಮತ್ತು ಜೀವನದ ಮಾರ್ಗಗಳನ್ನು ಎಲ್ಲರೂ ಕಲಿಯಬಹುದು. ಏಕಾಗ್ರತೆ, ಆಂತರಿಕ ಶಾಂತಿ, ತೃಪ್ತಿ, ಆತ್ಮಜಾಗೃತಿ, ಈಶ್ವರನ ಸಾನಿಧ್ಯ ಮತ್ತು ಯಶಸ್ವಿ ಜೀವನದ ಮಾರ್ಗದರ್ಶನ ಸಿಗುತ್ತದೆ. ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಈ ಪಾಠಗಳನ್ನು ಕಲಿತುಕೊಳ್ಳಬಹುದು’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾ(ವೈಎಸ್ಎಸ್) ಆಯೋಜಿಸಿದ್ದ ಸಮಾರಂಭದಲ್ಲಿ ಪರಮಹಂಸ ಯೋಗಾನಂದರು ಬೋಧಿಸಿದ್ದ ವೈಜ್ಞಾನಿಕ ಧ್ಯಾನದ ತಂತ್ರಗಳು ಹಾಗೂ ಯಶಸ್ವಿ ಜೀವನದ ಪಾಠಗಳನ್ನು ಕನ್ನಡದಲ್ಲಿ ಮಂಗಳವಾರ ಬಿಡುಗೊಳಿಸಲಾಯಿತು. </p>.<p>ವೈಎಸ್ಎಸ್ ಉಪಾಧ್ಯಕ್ಷ ಸ್ವಾಮಿ ಸ್ಮರಣಾನಂದ ಗಿರಿ ಮಾತನಾಡಿ, ‘ಮಾನಸಿಕ ಒತ್ತಡ ಮತ್ತು ಅಶಾಂತಿಯ ವಾತಾವರಣ ಇರುವ ಈಗಿನ ಸಂದರ್ಭದಲ್ಲಿ ಧ್ಯಾನದ ತಂತ್ರಗಳು ಅವಶ್ಯಕವಾಗಿವೆ. ಮಕ್ಕಳು, ಹಿರಿಯರು ಪ್ರಾಚೀನ ಯೋಗದ ತಂತ್ರಗಳ ಮೂಲಕ ಮನಸ್ಸನ್ನು ನಿಯಂತ್ರಿಸಿ, ಜೀವನದಲ್ಲಿ ಶಾಂತಿ, ಸೌಹಾರ್ದ, ಸಂತೋಷ, ಏಕಾಗ್ರತೆ ಸಾಧಿಸಬಹುದು’ ಎಂದರು. </p>.<p>‘ಯೋಗದ ಸತ್ಸಂಗ ಪಾಠಗಳನ್ನು ಹಂತ ಹಂತವಾಗಿ ಕಲಿಸುವ ಗೃಹ ಅಧ್ಯಯನ ಕೋರ್ಸ್ ಇದಾಗಿದೆ. ಪರಮಹಂಸ ಯೋಗಾನಂದರು ಬೋಧಿಸಿದ ಪ್ರಾಯೋಗಿಕ ಧ್ಯಾನ ವಿಧಾನಗಳು ಮತ್ತು ಜೀವನದ ಮಾರ್ಗಗಳನ್ನು ಎಲ್ಲರೂ ಕಲಿಯಬಹುದು. ಏಕಾಗ್ರತೆ, ಆಂತರಿಕ ಶಾಂತಿ, ತೃಪ್ತಿ, ಆತ್ಮಜಾಗೃತಿ, ಈಶ್ವರನ ಸಾನಿಧ್ಯ ಮತ್ತು ಯಶಸ್ವಿ ಜೀವನದ ಮಾರ್ಗದರ್ಶನ ಸಿಗುತ್ತದೆ. ದೈನಂದಿನ ಕರ್ತವ್ಯಗಳನ್ನು ನಿರ್ವಹಿಸುವುದರ ಜೊತೆಗೆ ಈ ಪಾಠಗಳನ್ನು ಕಲಿತುಕೊಳ್ಳಬಹುದು’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>