‘ಇತ್ತೀಚೆಗೆ ನಮ್ಮ ಮನೆಗೆ ಬಾಡಿಗೆದಾರರು ಬಂದಿದ್ದಾರೆ. ಅವರ ಆಧಾರ್ ಪರಿಶೀಲಿಸಿದಾಗ, ದಂಡುಪಾಳ್ಯ ಗ್ರಾಮದವರು ಎಂದು ಗೊತ್ತಾಗಿದೆ. ಈ ಗ್ರಾಮದವರು ಕೊಲೆ ಮಾಡಿ ಆಭರಣ ದೋಚುತ್ತಾರೆಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ದೃಶ್ಯಗಳನ್ನು ನೋಡಿ ಭಯವೂ ಆಗಿತ್ತು. ಇದೀಗ, ಅದೇ ಗ್ರಾಮದ ನಿವಾಸಿ ನಮ್ಮ ಮನೆ ಬಾಡಿಗೆಗೆ ಬಂದಿದ್ದಾರೆ. ಬಾಡಿಗೆ ಕೊಡಬಹುದೇ’ ಎಂದೂ ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.