ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಂಡುಪಾಳ್ಯದವರಿಗೆ ಮನೆ ಬಾಡಿಗೆ: ಪೊಲೀಸರ ಸಲಹೆ ಕೇಳಿದ ಮಾಲೀಕ!

Last Updated 8 ಫೆಬ್ರುವರಿ 2022, 20:56 IST
ಅಕ್ಷರ ಗಾತ್ರ

ಬೆಂಗಳೂರು: ‘ದಂಡುಪಾಳ್ಯ ಸಿನಿಮಾ ನೋಡಿದರೆ, ಭಯವಾಗುತ್ತದೆ’ ಎಂದು ಟ್ವೀಟ್ ಮಾಡಿರುವ ನಗರದ ಮನೆ ಮಾಲೀಕರೊಬ್ಬರು, ‘ದಂಡುಪಾಳ್ಯದವರಿಗೆ ಮನೆ ಬಾಡಿಗೆಗೆ ಕೊಡಬಹುದಾ?’ ಎಂದು ಪೊಲೀಸರ ಸಲಹೆ ಕೋರಿದ್ದಾರೆ.

‘ಬೆಂಗಳೂರು ಸಿಟಿ ಪೊಲೀಸ್’ ಟ್ವಿಟರ್‌ ಖಾತೆಗೆ ತಮ್ಮ ಸಂದೇಶ ಟ್ಯಾಗ್ ಮಾಡಿರುವ ಕೃಷ್ಣಮೂರ್ತಿ ಎಂಬುವರು, ‘ಬಾಡಿಗೆಗೆ ನೀಡುವ ವಿಚಾರದಲ್ಲಿ ದಯವಿಟ್ಟು ಸಹಾಯ ಮಾಡಿ’ ಎಂದಿದ್ದಾರೆ.

‘ಇತ್ತೀಚೆಗೆ ನಮ್ಮ ಮನೆಗೆ ಬಾಡಿಗೆದಾರರು ಬಂದಿದ್ದಾರೆ. ಅವರ ಆಧಾರ್ ‍ಪರಿಶೀಲಿಸಿದಾಗ, ದಂಡುಪಾಳ್ಯ ಗ್ರಾಮದವರು ಎಂದು ಗೊತ್ತಾಗಿದೆ. ಈ ಗ್ರಾಮದವರು ಕೊಲೆ ಮಾಡಿ ಆಭರಣ ದೋಚುತ್ತಾರೆಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದ ದೃಶ್ಯಗಳನ್ನು ನೋಡಿ ಭಯವೂ ಆಗಿತ್ತು. ಇದೀಗ, ಅದೇ ಗ್ರಾಮದ ನಿವಾಸಿ ನಮ್ಮ ಮನೆ ಬಾಡಿಗೆಗೆ ಬಂದಿದ್ದಾರೆ. ಬಾಡಿಗೆ ಕೊಡಬಹುದೇ’ ಎಂದೂ ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ.

ಅದಕ್ಕೆ ಪೊಲೀಸರು, ‘ಮನೆ ಸಮೀಪದ ಠಾಣೆಗೆ ಹೋಗಿ. ಅವರು ನಿಮಗೆ ಸಹಾಯ ಮಾಡುತ್ತಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT