ಬೀದರ್: ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಲಬುರಗಿ ಹಾಗೂ ಬೀದರ್ ವಿಭಾಗಕ್ಕೆ 100 ಹೊಸ ಬಸ್ ಕೊಡಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ನೂತನ ಕಟ್ಟಡಕ್ಕೆಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು,ಬಿಎಂಟಿಸಿಗೆ 300 ಬಸ್ಗಳನ್ನು ಖರೀದಿಸಲಾಗುವುದು. ಈಗಾಗಲೇ 95 ಬಂದಿವೆ ಎಂದರು.
ಶಾಸಕ ರಹೀಂ ಖಾನ್ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ, ಸಾರಿಗೆ ಆಯುಕ್ತ ಕುಮಾರ, ಹೆಚ್ಚುವರಿ ಆಯುಕ್ತ ಮಾರುತಿ ಸಾಮ್ರಾಣಿ,ಆರ್ಟಿಒ ನಾರಾಯಣ ಸ್ವಾಮಿ ಇದ್ದರು.