ನಗರದ ಕುಂಬಾರವಾಡ, ವಿದ್ಯಾನಗರದ ಚರ್ಚ್, ರೋಸ್ ಮೆಮೊರಿಯಲ್ ಚರ್ಚ್, ಶಹಾಪೂರ ಗೇಟ್ ಬಳಿಯ ಶಹಾಪುರ ಗೇಟ್ ಸಮೀಪದ ಸೇಂಟ್ ಜೋಸೆಫ್ ಚರ್ಚ್, ಬೀದರ್ ತಾಲ್ಲೂಕಿನ ಮಿರ್ಜಾಪುರದ ಗುಹೆಯಲ್ಲಿರುವ ಚರ್ಚ್, ಆಣದೂರಿನ ಸೇಂಟ್ ಪೌಲ್ ಮೆಥೋಡಿಸ್ಟ್ ಚರ್ಚ್ಗಳಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿ ಹಬ್ಬದ ಕಾರ್ಯಕ್ರಮಗಳಿಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕ್ರೈಸ್ತರು ಗುಂಪುಗಳಲ್ಲಿ ಗೋದಲಿ ಹಾಡುಗಳನ್ನು ಹಾಡುತ್ತ ಸೃಷ್ಟಿಕೃರ್ತನನ್ನು ಸ್ಮರಿಸುತ್ತ ಕ್ರೈಸ್ತರ ಮನೆ ಮನೆಗೆ ಭೇಟಿ ನೀಡಿ ಶುಭ ಹಾರೈಸಿದರು. ಮಕ್ಕಳು, ಮಹಿಳೆಯರು ಆದಿಯಾಗಿ ಮೆರವಣಿಗೆಯಲ್ಲಿ ಭಾಗವಹಿಸಿ ಭಕ್ತಿಭಾವ ಮೆರೆದರು.