ಬೀದರ್ ತಾಲ್ಲೂಕಿನ ಚಿಲ್ಲರ್ಗಿ, ಶ್ರೀಮಂಡಲ, ಕಾಶೆಂಪೂರ, ಔರಾದ್ ತಾಲ್ಲೂಕಿನ ಶೆಂಬೆಳ್ಳಿ, ಮಸ್ಕಲ್, ಜಿರ್ಗಾ(ಕೆ), ಅಶೋಕನಗರ ತಾಂಡಾ, ಹುಮನಾಬಾದ್ ತಾಲ್ಲೂಕಿನ ಸಿತಾಳಗೇರಾ, ಅಲ್ಲೂರ, ನಿಂಬೂರ, ವಡ್ಡನಕೇರಾ, ಸುಲ್ತಾನಬಾದ್ವಾಡಿ, ಪಂಢರಗೇರಾ, ಕಲ್ಲೂರ ತಾಂಡಾ, ನಿಂಗದಳ್ಳಿ ಹಾಗೂ ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿ, ಸಿಕಂದರಾಬಾದ್ ವಾಡಿ, ರಾಚಪ್ಪ ಗೌಡಗಾಂವ್ ಗ್ರಾಮಗಳಿಗೆ ಸರಿಯಾದ ಸಮಯಕ್ಕೆ ಬಸ್ ಓಡಿಸಬೇಕು ಎಂದು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರು ಈ ಕುರಿತು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.