ಬೀದರ್: ಇಲ್ಲಿಯ ನೆಹರೂ ಕ್ರೀಡಾಂಗಣ ಸಮೀಪ ಇರುವ ಗುರುನಾನಕ ಪಬ್ಲಿಕ್ ಶಾಲೆಯಲ್ಲಿ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕ, ಉಪ ನಾಯಕ, ವಿದ್ಯಾರ್ಥಿನಿ ನಾಯಕಿ, ಉಪ ನಾಯಕಿಯರ ಪ್ರತಿಜ್ಞೆ ಸ್ವೀಕಾರ ಕಾರ್ಯಕ್ರಮ ನಡೆಯಿತು.
ವಿದ್ಯಾರ್ಥಿಗಳು ಸೇವಾ ಕಾರ್ಯವನ್ನು ಶಾಲಾ ಹಂತದಿಂದಲೇ ಆರಂಭಿಸಬೇಕು. ಮುಂದೆ ದೇಶ ಸೇವೆಗೆ ಸಿದ್ಧರಾಗಬೇಕು ಎಂದು ಪ್ರತಿಜ್ಞೆ ಬೋಧಿಸಿದ ಗುರುನಾನಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷೆ ರೇಷ್ಮಾ ಕೌರ್ ಹೇಳಿದರು.
ಸಾಧನೆಗೆ ಜೀವನದಲ್ಲಿ ಗುರಿ ಇಟ್ಟುಕೊಳ್ಳಬೇಕು. ಪರಿಶ್ರಮ, ಶಿಸ್ತು, ಪರೋಪಕಾರದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ವಿದ್ಯಾರ್ಥಿಗಳು ಒಳ್ಳೆಯ ನಾಗರಿಕರಾಗಬೇಕು ಎಂದು ಪಶು ವೈದ್ಯಕೀಯ ಕಾಲೇಜಿನ ಡಾ. ಬಿ.ವಿ. ಶಿವ್ರಪಕಾಶ ಹೇಳಿದರು. ಪ್ರಾಚಾರ್ಯ ಎನ್. ರಾಜು, ಪವನಪ್ರಿಯ, ಅಮಜದ್ ಅಲಿ ಉಪಸ್ಥಿತರಿದ್ದರು.