ತಾಲ್ಲೂಕಿನ ತಳಭೋಗದ ಗೋವಿಂದ ಸಸಾನೆ (40) ಹಾಗೂ ಸಸ್ತಾಪುರದ ಕಲಾವತಿ ವಿಜಯಕುಮಾರ (41) ಮೃತರು. ತಳಭೋಗದಿಂದ ದ್ವಿಚಕ್ರ ವಾಹನದಲ್ಲಿ ಸಸ್ತಾಪುರಕ್ಕೆ ಹೋಗುವಾಗ ಅಪರಿಚಿತ ಕಾರ್ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಹಿಳೆ ಮಂಜುಳಾಬಾಯಿ ಗಾಯಗೊಂಡಿದ್ದು ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಇಲ್ಲಿನ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.