ಬೀದರ್: ಬಹುಭಾಷಾ ನಟ, ಪ್ರಕಾಶ ರೈ ನಗರದ ಗುರುನಾನಕ ಆಸ್ಪತ್ರೆಗೆ ಸುಸಜ್ಜಿತ ಆಂಬುಲೆನ್ಸ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ದಾರ್ ಪುನೀತಸಿಂಗ್ ಈಚೆಗೆ ಆಂಬುಲೆನ್ಸ್ ಕೀ ಪಡೆದರು.
ಅತೀ ಕಡಿಮೆ ವೆಚ್ಚದಲ್ಲಿ, ಅತ್ಯುತ್ತಮ ಚಿಕಿತ್ಸೆ ನೀಡುತ್ತಿರುವ ಹಿನ್ನೆಲೆಯಲ್ಲಿ ಗುರುನಾನಕ್ ಆಸ್ಪತ್ರೆಗೆ ಈ ಕೊಡುಗೆ ನೀಡಲಾಗಿದೆ. ನಟ ಪ್ರಕಾಶ ರೈ ಅವರ ಕೊಡುಗೆ ಮಾದರಿಯಾಗಿದೆ. ಬಡವರ, ದುರ್ಬಲರ ಸೇವೆಗೆ ಇನ್ನಷ್ಟು ಶಕ್ತಿ ನೀಡಿದೆ ಎಂದು ಆಸ್ಪತ್ರೆಯ ಉಪಾಧ್ಯಕ್ಷೆ ಡಾ. ರೇಷ್ಮಾ ಕೌರ್ ಹೇಳಿದ್ದಾರೆ.
ಜನಪರ ಕಾಳಜಿಗೆ ನಟ ಪ್ರಕಾಶ ರೈ ಹೆಸರಾಗಿದ್ದಾರೆ. ಬಡವರಿಗೆ ನೆರವಾಗುವುದಕ್ಕಾಗಿ ಆಂಬುಲೆನ್ಸ್ ನೀಡಿದ್ದಾರೆ. ಅವರ ಕೊಡುಗೆ ಜನಸೇವೆಗೆ ನೆರವಾಗಲಿದೆ ತಿಳಿಸಿದ್ದಾರೆ.