ಉಪನ್ಯಾಸಕ ರೇವಣಸಿದ್ದಪ್ಪ ದೊರೆ ಮಾತನಾಡಿ,‘ಬಸವಪೂರ್ವ ಯುಗದಲ್ಲಿನ ಕನ್ನಡ ಯಾರಿಗೂ ತಿಳಿಯುತ್ತಿರಲಿಲ್ಲ. ಆದ್ದರಿಂದ ಅಲ್ಲಮರು ಅದನ್ನು ಶುದ್ಧೀಕರಿಸಿ ನೀಡಿದರು. ಅವರು ಮಹಾಕವಿ, ಯೋಗಿ, ವಚನಕಾರ, ತತ್ವಜ್ಞಾನಿ ಆಗಿದ್ದರು. ಎಲ್ಲ ಸಾಹಿತ್ಯಗಳ ತಲಸ್ಪರ್ಶಿ ಅಧ್ಯಯನ ಅವರದ್ದಾಗಿತ್ತು. ಸಮಾಜವನ್ನು ಅಂತಃಕರಣದಿಂದ ನೋಡಿ ಜಾಗೃತಿ ಮೂಡಿಸುವುದಕ್ಕೆ ಅವರು ಪ್ರಯತ್ನಿಸಿದರು. ನಾವೆಲ್ಲ ಅವರ ನೆಲದಲ್ಲಿ ನಲೆದಾಡುತ್ತಿದ್ದೇವೆ ಎಂಬುದೇ ಹೆಮ್ಮೆಯ ಸಂಗತಿ’ ಎಂದರು.