‘12 ನೇ ಶತಮಾನದಲ್ಲಿ ಬಸವಣ್ಣನವರು ಮಹಿಳಾ ಸಂಕುಲಕ್ಕೆ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಿಕೊಟ್ಟರು. ಅವರ ವಿಚಾರಗಳನ್ನು ಒಪ್ಪಿಕೊಳ್ಳದವರು ವಚನಗಳನ್ನು ಸುಡಲು ಮುಂದಾದರು. ಅಂತಹ ಮನಸ್ಥಿತಿ ಹೊಂದಿದ ಪುರುಷಲೋಕ ಇಂದಿಗೂ ಸ್ತ್ರೀ ಶೋಷಣೆ ಮಾಡುತ್ತಿದ್ದಾರೆ. ಮಹಿಳೆಯರು ಶೋಷಣೆಯನ್ನು ಸಹಿಸಿಕೊಳ್ಳದೆ ಪ್ರತಿಭಟಿಸಬೇಕು’ ಎಂದರು.