ಸಚಿವರು ಕಲಾ ತಂಡಗಳೊಂದಿಗೆ ಭಜನೆ, ಕೋಲಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಉಜನಿ, ಚಟ್ನಾಳ, ಡೊಂಗರಗಾಂವ, ಮದನೂರ, ಸಂಗಮ್, ಹೆಡಗಾಪುರ, ದಾಬಕಾ, ಠಾಣಾಕುಶನೂರ, ವಡಗಾಂವ ಸೇರಿದಂತೆ ಔರಾದ್ ಹಾಗೂ ಕಮಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 75 ತಂಡಗಳು ಭಜನೆ, ಕೋಲಾಟ, ತಮಟೆ ವಾದನ, ಡೊಳ್ಳು ಕುಣಿತ, ಬಂಜಾರಾ ನೃತ್ಯ ಸೇರಿದಂತೆ ವೈವಿಧ್ಯಮಯ ಜಾನಪದ ಕಲಾ ಪ್ರದರ್ಶನ ನೀಡಿದವು. ಬಳಿಕ ಕಲಾವಿದರಿಗೆ ಸಚಿವರು ಪ್ರಮಾಣ ಪತ್ರಗಳನ್ನು ವಿತರಿಸಿದರು.