<p><strong>ಬೀದರ್</strong>: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಮೈಲೂರಿನ ರಿಂಗ್ ರಸ್ತೆಯಲ್ಲಿರುವ ಸಿದ್ದರಾಮಯ್ಯ ಬಡಾವಣೆಯ ಬುಡಾ ಲೇಔಟ್ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಿದ ಅಟಲ್ ಉದ್ಯಾನವನ್ನು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.</p>.<p>ಮೂರು ಎಕರೆ ಪ್ರದೇಶದ ಪಾರ್ಕ್ನಲ್ಲಿ ಬುಡಾ ಅಧ್ಯಕ್ಷ ಬಾಬುವಾಲಿ ಅವರು ₹ 25 ಲಕ್ಷ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸುತ್ತಿದ್ದಾರೆ. ನನ್ನ ಅನುದಾನದಲ್ಲಿ 20 ಸಿಮೆಂಟ್ ಕುರ್ಚಿಗಳನ್ನು ಒದಗಿಸುವೆ ಎಂದು ಅವರು ತಿಳಿಸಿದರು.</p>.<p>ಉದ್ಯಾನವನ್ನು ಅಮೃತ ಯೋಜನೆಯಡಿ ಅಭಿವೃದ್ಧಿ ಪಡಿಸಿದರೆ ಉತ್ತಮ ಎಂದು ಬುಡಾ ಅಧ್ಯಕ್ಷ ಬಾಬುವಾಲಿ ಕೇಂದ್ರ ಸಚಿವರ ಗಮನ ಸೆಳೆದರು.</p>.<p>ಉದ್ಯಾನಕ್ಕೆ ಹೈಮಾಸ್ಟ್ ದೀಪ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಸದಸ್ಯ ಶಶಿ ಹೊಸಳ್ಳಿ ಹೇಳಿದರು.</p>.<p>ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಶಕುಂತಲಾ ಬೆಲ್ದಾಳೆ, ಪ್ರಕಾಶ ಟೊಣ್ಣೆ, ಹಣಮಂತ ಬುಳ್ಳಾ, ಪ್ರದೀಪ್ ವಾತಡೆ, ಬಸವರಾಜ ಪವಾರ್ ಹಾಗೂ ಶಿವಾನಂದ ಗಟ್ಟಿ ಇದ್ದರು.</p>.<p class="Briefhead"><strong>ವಾಜಪೇಯಿ ಭಾವಚಿತ್ರಕ್ಕೆ ಪೂಜೆ<br />ಬೀದರ್: </strong>ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನ ಆಚರಿಸಲಾಯಿತು.</p>.<p>ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಜಯಕುಮಾರ ಕಾಂಗೆ, ಈಶ್ವರಸಿಂಗ್ ಠಾಕೂರ್, ಹಣಮಂತ ಬುಳ್ಳಾ, ಶಕುಂತಲಾ ಬೆಲ್ದಾಳೆ, ರಾಜು ಚಿದ್ರಿ, ಪ್ರಕಾಶ ಟೊಣ್ಣೆ, ರಾಜಕುಮಾರ ಪಾಟೀಲ ನ್ಯಾಮತಾಬಾದ್, ಮಹೇಶ ಪಾಲಂ, ಶ್ರೀನಿವಾಸ ಚೌಧರಿ, ಸುಭಾಷ ಮಡಿವಾಳ, ಬಸವರಾಜ ಪವಾರ್, ಸುರೇಶ ಮಾಶೆಟ್ಟಿ, ಅನಿಲ್ ರಾಜಗೀರಾ, ಸಂಜು ಸ್ವಾಮಿ, ಆನಂದ ಮಠ ಇದ್ದರು.</p>.<p>ಯುವ ಮೋರ್ಚಾ: ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ನಗರದ ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು.</p>.<p>ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಂಬರೀಷ ಬಟನಾಪುರೆ, ಅನಿಲ್ ರಾಜಗೀರಾ, ಸುನೀಲ್ ಗೌಳಿ, ಶರಣು ಬಿರಾದಾರ, ಮಹೇಶ ವಿಶ್ವಕರ್ಮ, ಪವನ್ ಉಂಟೆ, ಸಂಜಯ್ ಪಾಲ್ಗೊಂಡಿದ್ದರು.</p>.<p class="Briefhead"><strong>‘ಮುತ್ಸದ್ದಿ ಪ್ರಧಾನಿ’<br />ಔರಾದ್: </strong>‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಆದರ್ಶ ರಾಜಕಾರಣಿಯಾಗಿದ್ದರು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.</p>.<p>ಪಕ್ಷದ ಕಚೇರಿಯಲ್ಲಿ ಶನಿವಾರ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಹತ್ತು ಹಲವು ಯೋಜನೆಗಳ ಬಗ್ಗೆ ಈಗಲೂ ಜನ ನೆನಪಿಸುತ್ತಾರೆ’ ಎಂದರು.</p>.<p>ಮುಖಂಡ ಬಂಡೆಪ್ಪ ಕಂಟೆ ಮಾತನಾಡಿ,‘ವಾಜಪೇಯಿ ಕವಿ, ಸಾಹಿತಿ ಅಲ್ಲದೆ ಉತ್ತಮ ಸ್ನೇಹ ಜೀವಿಯಾಗಿದ್ದರು. ವಿರೋಧ ಪಕ್ಷಗಳು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು’ ಎಂದು ನೆನಪಿಸಿದರು.</p>.<p>ಅಶೋಕ ಅಲ್ಮಾಜೆ, ರಮೇಶ ಉಪಾಸೆ ಹಾಗೂ ಪಕ್ಷದ ಪ್ರಮುಖರು ಇದ್ದರು. ಇದೇ ವೇಳೆ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮ ನಡೆಸಿದರು.</p>.<p class="Briefhead"><strong>‘ದೇಶ ಕಂಡ ಆದರ್ಶ ನೇತಾರ’<br />ಭಾಲ್ಕಿ: </strong>‘ಮಾಜಿ ಪ್ರಧಾನಿ, ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಆದರ್ಶ ನೇತಾರ, ಮುತ್ಸದ್ದಿ ಸಂಸದೀಯಪಟು, ಅಜಾತಶತ್ರು ಆಗಿದ್ದರು’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಸುಶಾಸನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p class="Briefhead">ವಾಜಪೇಯಿ ಅವರ ಅದ್ವಿತೀಯ ವ್ಯಕ್ತಿತ್ವ, ಆಡಳಿತ ವೈಖರಿ, ನಾಯಕತ್ವ, ಸಾಧನೆಗಳು ಎಲ್ಲರಿಗೂ ಮಾದರಿ, ಸ್ಫೂರ್ತಿದಾಯಕ ಎಂದು ಹೇಳಿದರು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ,‘ಅಟಲ್ ಜೀ ಅವರು ರಾಷ್ಟ್ರ ರಾಜಕಾರಣದ ಧೀಮಂತ ನಾಯಕರಾಗಿದ್ದರು. ಅವರು ತಮ್ಮ ಆಡಳಿತ ವೈಖರಿಯಿಂದ ಜನಮಾನಸದಲ್ಲಿ ಅಜಾತಶತ್ರು ಎಂಬ ಬಿರುದನ್ನು ಪಡೆದ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಾಗಿದ್ದಾರೆ’ ಎಂದರು.</p>.<p class="Briefhead">ಪ್ರಮುಖರಾದ ಪಂಡಿತ ಶಿರೋಳೆ, ಸುರೇಶ ಹುಬ್ಬಳ್ಳಿಕರ, ಗೋವಿಂದರಾವ್ ಬಿರಾದರ, ವಿಶ್ವನಾಥ ಮೋರೆ, ಪಿ.ಆರ್.ಪಾಟೀಲ, ಶಿವಾಜಿ ಮೇತ್ರೆ, ಎಲ್.ಎಂ. ಕಾಂಬಳೆ, ಶರದ ದುರ್ಗಳೆ, ಪಂಢರಿ ಮೇತ್ರೆ, ಸಿದ್ದು ಕಾಡದಿ, ಸಂಗಮೇಶ ಭೂರೆ, ಪ್ರವೀಣ ಸವರೆ, ತುಕರಾಮ ಹಜಾರೆ, ಸಂಜೀವ ಶಿಂಧೆ, ರಮೇಶ್ ಬಿರಾದರ, ಕೈಲಾಸ ಪಾಟೀಲ, ಜೈ ಭೀಮ ಹಾಗೂ ಮಲ್ಲಪ್ಪ ದೇಶಮುಖ ಇದ್ದರು.</p>.<p class="Briefhead"><strong>‘ವಾಜಪೇಯಿ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ’<br />ಚಿಟಗುಪ್ಪ: </strong>‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಹಾಗೂ ನಡವಳಿಕೆಯನ್ನು ವಿಶ್ವ ಮೆಚ್ಚಿ ಕೊಂಡಾಡುತ್ತಿದೆ’ ಎಂದು ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ ಕಲ್ಲೂರ್ ಹೇಳಿದರು.</p>.<p>ಇಲ್ಲಿಯ ಗಾಂಧಿ ವೃತ್ತದಲ್ಲಿ ಶನಿವಾರ ರಾತ್ರಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಆರೋಗ್ಯದ ಕಾರಣದಿಂದಾಗಿ ಸಕ್ರಿಯ ರಾಜಕೀಯದಿಂದ ನಿವೃತ್ತರಾದರು’ ಎಂದು ತಿಳಿಸಿದರು.</p>.<p>ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಮಾತನಾಡಿ,‘ವಾಜಪೇಯಿ ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇತ್ತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಸಾಧನೆ’ ಎಂದರು.</p>.<p>ಸೂರ್ಯಕಾಂತ ದೋಣಿ ಉಪನ್ಯಾಸ ನೀಡಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬಿಎಸ್ಎಸ್ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ, ವಿಶ್ವನಾಥ ಪಾಟೀಲ, ಬಿಜೆಪಿ ಮುಖಂಡರಾದ ಸೂರ್ಯಕಾಂತ ಮಠಪತಿ, ರವಿ ಹೂಗಾರ್, ಪ್ರಭಾಕರ್ ನಾಗರಾಳೆ, ಪ್ರದೀಪ ವಾಗಲೆ, ರಾಜಪ್ಪ ಪೂಜಾರಿ ಹಾಗೂ ಸೋಮನಾಥ ಪಾಟೀಲ ವೇದಿಕೆಯಲ್ಲಿದ್ದರು.</p>.<p>ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಲಾಯಿತು.</p>.<p>ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.</p>.<p>ಹೈದರಾಬಾದ್ನ ನಾರಾಯಣ ಹೃದಯಾಲಯದ ಡಾ.ಡಿ.ಜೆ.ಡಿ ರಾವ್ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ಸಚಿನ್ ಮಠಪತಿ ವಂದಿಸಿದರು.</p>.<p class="Briefhead"><strong>ಹುಮನಾಬಾದ್: ಹಣ್ಣು, ಬ್ರೆಡ್ ವಿತರಣೆ<br />ಹುಮನಾಬಾದ್: ‘</strong>ಎಲ್ಲ ಪಕ್ಷದ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿ, ರಾಜಕೀಯ ಅಜಾತಶತ್ರು ಎಂಬ ಖ್ಯಾತಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾತ್ರರಾಗಿದ್ದರು’ ಎಂದು ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ತಿಳಿಸಿದರು.</p>.<p>ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿ ಅವರು ಮಾತನಾಡಿದರು.</p>.<p>‘ವಾಜಪೇಯಿ ಅವರು ರಾಜಕಾರಣಿ ಅಲ್ಲದೆ, ಶ್ರೇಷ್ಠ ಕವಿಯಾಗಿದ್ದರು. ದೇಶದ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದ ಅವರು ಇಂದಿನ ರಾಜಕೀಯ ನಾಯಕರಿಗೆ ಆದರ್ಶವಾಗಿದ್ದಾರೆ’ ಎಂದು ಹೇಳಿದರು.</p>.<p>ಬಿ.ಎಸ್.ಎಸ್.ಕೆ. ಕಾರ್ಖಾನೆ ನಿರ್ದೇಶಕ ವಿಶ್ವನಾಥ್ ಪಾಟೀಲ ಮಾಡಗೂಳ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಭಾಕರ್ ನಾಗರಾಳೆ, ಗಿರೀಶ್ ತುಂಬಾ, ಕರಬಸಪ್ಪ, ವೀರೇಶ್ ಸಜ್ಜನ್, ಅನಿಲ್ ಪಸರ್ಗಿ, ಶ್ರೀನಾಥ್ ದೇವಣಿ, ಸುನಿಲ್ ಪತ್ರಿ ಹಾಗೂ ಸಂಜು ವಾಡೆಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಮೈಲೂರಿನ ರಿಂಗ್ ರಸ್ತೆಯಲ್ಲಿರುವ ಸಿದ್ದರಾಮಯ್ಯ ಬಡಾವಣೆಯ ಬುಡಾ ಲೇಔಟ್ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ನಿರ್ಮಿಸಿದ ಅಟಲ್ ಉದ್ಯಾನವನ್ನು ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಉದ್ಘಾಟಿಸಿದರು.</p>.<p>ಮೂರು ಎಕರೆ ಪ್ರದೇಶದ ಪಾರ್ಕ್ನಲ್ಲಿ ಬುಡಾ ಅಧ್ಯಕ್ಷ ಬಾಬುವಾಲಿ ಅವರು ₹ 25 ಲಕ್ಷ ವೆಚ್ಚದಲ್ಲಿ ವಾಕಿಂಗ್ ಟ್ರ್ಯಾಕ್ ನಿರ್ಮಿಸುತ್ತಿದ್ದಾರೆ. ನನ್ನ ಅನುದಾನದಲ್ಲಿ 20 ಸಿಮೆಂಟ್ ಕುರ್ಚಿಗಳನ್ನು ಒದಗಿಸುವೆ ಎಂದು ಅವರು ತಿಳಿಸಿದರು.</p>.<p>ಉದ್ಯಾನವನ್ನು ಅಮೃತ ಯೋಜನೆಯಡಿ ಅಭಿವೃದ್ಧಿ ಪಡಿಸಿದರೆ ಉತ್ತಮ ಎಂದು ಬುಡಾ ಅಧ್ಯಕ್ಷ ಬಾಬುವಾಲಿ ಕೇಂದ್ರ ಸಚಿವರ ಗಮನ ಸೆಳೆದರು.</p>.<p>ಉದ್ಯಾನಕ್ಕೆ ಹೈಮಾಸ್ಟ್ ದೀಪ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ನಗರಸಭೆ ಸದಸ್ಯ ಶಶಿ ಹೊಸಳ್ಳಿ ಹೇಳಿದರು.</p>.<p>ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಶಕುಂತಲಾ ಬೆಲ್ದಾಳೆ, ಪ್ರಕಾಶ ಟೊಣ್ಣೆ, ಹಣಮಂತ ಬುಳ್ಳಾ, ಪ್ರದೀಪ್ ವಾತಡೆ, ಬಸವರಾಜ ಪವಾರ್ ಹಾಗೂ ಶಿವಾನಂದ ಗಟ್ಟಿ ಇದ್ದರು.</p>.<p class="Briefhead"><strong>ವಾಜಪೇಯಿ ಭಾವಚಿತ್ರಕ್ಕೆ ಪೂಜೆ<br />ಬೀದರ್: </strong>ನಗರದ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ 97ನೇ ಜನ್ಮದಿನ ಆಚರಿಸಲಾಯಿತು.</p>.<p>ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್ ಅವರು ವಾಜಪೇಯಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.</p>.<p>ಕೆಎಸ್ಐಐಡಿಸಿ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ, ಬುಡಾ ಅಧ್ಯಕ್ಷ ಬಾಬುವಾಲಿ, ಮುಖಂಡರಾದ ಜಯಕುಮಾರ ಕಾಂಗೆ, ಈಶ್ವರಸಿಂಗ್ ಠಾಕೂರ್, ಹಣಮಂತ ಬುಳ್ಳಾ, ಶಕುಂತಲಾ ಬೆಲ್ದಾಳೆ, ರಾಜು ಚಿದ್ರಿ, ಪ್ರಕಾಶ ಟೊಣ್ಣೆ, ರಾಜಕುಮಾರ ಪಾಟೀಲ ನ್ಯಾಮತಾಬಾದ್, ಮಹೇಶ ಪಾಲಂ, ಶ್ರೀನಿವಾಸ ಚೌಧರಿ, ಸುಭಾಷ ಮಡಿವಾಳ, ಬಸವರಾಜ ಪವಾರ್, ಸುರೇಶ ಮಾಶೆಟ್ಟಿ, ಅನಿಲ್ ರಾಜಗೀರಾ, ಸಂಜು ಸ್ವಾಮಿ, ಆನಂದ ಮಠ ಇದ್ದರು.</p>.<p>ಯುವ ಮೋರ್ಚಾ: ಬಿಜೆಪಿ ನಗರ ಯುವ ಮೋರ್ಚಾ ವತಿಯಿಂದ ನಗರದ ಬಿಜೆಪಿ ನಗರ ಘಟಕದ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಆಚರಿಸಲಾಯಿತು.</p>.<p>ನಗರ ಘಟಕದ ಅಧ್ಯಕ್ಷ ಹಣಮಂತ ಬುಳ್ಳಾ, ಯುವ ಮೋರ್ಚಾ ನಗರ ಘಟಕದ ಅಧ್ಯಕ್ಷ ಅಂಬರೀಷ ಬಟನಾಪುರೆ, ಅನಿಲ್ ರಾಜಗೀರಾ, ಸುನೀಲ್ ಗೌಳಿ, ಶರಣು ಬಿರಾದಾರ, ಮಹೇಶ ವಿಶ್ವಕರ್ಮ, ಪವನ್ ಉಂಟೆ, ಸಂಜಯ್ ಪಾಲ್ಗೊಂಡಿದ್ದರು.</p>.<p class="Briefhead"><strong>‘ಮುತ್ಸದ್ದಿ ಪ್ರಧಾನಿ’<br />ಔರಾದ್: </strong>‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಈ ದೇಶ ಕಂಡ ಆದರ್ಶ ರಾಜಕಾರಣಿಯಾಗಿದ್ದರು’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ ಹೇಳಿದರು.</p>.<p>ಪಕ್ಷದ ಕಚೇರಿಯಲ್ಲಿ ಶನಿವಾರ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಜಾರಿಗೆ ತಂದ ಹತ್ತು ಹಲವು ಯೋಜನೆಗಳ ಬಗ್ಗೆ ಈಗಲೂ ಜನ ನೆನಪಿಸುತ್ತಾರೆ’ ಎಂದರು.</p>.<p>ಮುಖಂಡ ಬಂಡೆಪ್ಪ ಕಂಟೆ ಮಾತನಾಡಿ,‘ವಾಜಪೇಯಿ ಕವಿ, ಸಾಹಿತಿ ಅಲ್ಲದೆ ಉತ್ತಮ ಸ್ನೇಹ ಜೀವಿಯಾಗಿದ್ದರು. ವಿರೋಧ ಪಕ್ಷಗಳು ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು’ ಎಂದು ನೆನಪಿಸಿದರು.</p>.<p>ಅಶೋಕ ಅಲ್ಮಾಜೆ, ರಮೇಶ ಉಪಾಸೆ ಹಾಗೂ ಪಕ್ಷದ ಪ್ರಮುಖರು ಇದ್ದರು. ಇದೇ ವೇಳೆ ವಿವಿಧೆಡೆ ಸಸಿ ನೆಡುವ ಕಾರ್ಯಕ್ರಮ ನಡೆಸಿದರು.</p>.<p class="Briefhead"><strong>‘ದೇಶ ಕಂಡ ಆದರ್ಶ ನೇತಾರ’<br />ಭಾಲ್ಕಿ: </strong>‘ಮಾಜಿ ಪ್ರಧಾನಿ, ಭಾರತರತ್ನ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ದೇಶ ಕಂಡ ಆದರ್ಶ ನೇತಾರ, ಮುತ್ಸದ್ದಿ ಸಂಸದೀಯಪಟು, ಅಜಾತಶತ್ರು ಆಗಿದ್ದರು’ ಎಂದು ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೇಳಿದರು.ಇಲ್ಲಿಯ ಬಿಜೆಪಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ನಿಮಿತ್ತ ಹಮ್ಮಿಕೊಂಡಿದ್ದ ಸುಶಾಸನ ದಿವಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p class="Briefhead">ವಾಜಪೇಯಿ ಅವರ ಅದ್ವಿತೀಯ ವ್ಯಕ್ತಿತ್ವ, ಆಡಳಿತ ವೈಖರಿ, ನಾಯಕತ್ವ, ಸಾಧನೆಗಳು ಎಲ್ಲರಿಗೂ ಮಾದರಿ, ಸ್ಫೂರ್ತಿದಾಯಕ ಎಂದು ಹೇಳಿದರು. ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಮಾತನಾಡಿ,‘ಅಟಲ್ ಜೀ ಅವರು ರಾಷ್ಟ್ರ ರಾಜಕಾರಣದ ಧೀಮಂತ ನಾಯಕರಾಗಿದ್ದರು. ಅವರು ತಮ್ಮ ಆಡಳಿತ ವೈಖರಿಯಿಂದ ಜನಮಾನಸದಲ್ಲಿ ಅಜಾತಶತ್ರು ಎಂಬ ಬಿರುದನ್ನು ಪಡೆದ, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳಾಗಿದ್ದಾರೆ’ ಎಂದರು.</p>.<p class="Briefhead">ಪ್ರಮುಖರಾದ ಪಂಡಿತ ಶಿರೋಳೆ, ಸುರೇಶ ಹುಬ್ಬಳ್ಳಿಕರ, ಗೋವಿಂದರಾವ್ ಬಿರಾದರ, ವಿಶ್ವನಾಥ ಮೋರೆ, ಪಿ.ಆರ್.ಪಾಟೀಲ, ಶಿವಾಜಿ ಮೇತ್ರೆ, ಎಲ್.ಎಂ. ಕಾಂಬಳೆ, ಶರದ ದುರ್ಗಳೆ, ಪಂಢರಿ ಮೇತ್ರೆ, ಸಿದ್ದು ಕಾಡದಿ, ಸಂಗಮೇಶ ಭೂರೆ, ಪ್ರವೀಣ ಸವರೆ, ತುಕರಾಮ ಹಜಾರೆ, ಸಂಜೀವ ಶಿಂಧೆ, ರಮೇಶ್ ಬಿರಾದರ, ಕೈಲಾಸ ಪಾಟೀಲ, ಜೈ ಭೀಮ ಹಾಗೂ ಮಲ್ಲಪ್ಪ ದೇಶಮುಖ ಇದ್ದರು.</p>.<p class="Briefhead"><strong>‘ವಾಜಪೇಯಿ ವ್ಯಕ್ತಿತ್ವ ವಿಶ್ವಕ್ಕೆ ಮಾದರಿ’<br />ಚಿಟಗುಪ್ಪ: </strong>‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸಭ್ಯತೆ, ಹಾಸ್ಯಪ್ರಜ್ಞೆ, ಉದಾರ ವ್ಯಕ್ತಿತ್ವ ಹಾಗೂ ನಡವಳಿಕೆಯನ್ನು ವಿಶ್ವ ಮೆಚ್ಚಿ ಕೊಂಡಾಡುತ್ತಿದೆ’ ಎಂದು ಬಿಎಸ್ಎಸ್ಕೆ ಅಧ್ಯಕ್ಷ ಸುಭಾಷ ಕಲ್ಲೂರ್ ಹೇಳಿದರು.</p>.<p>ಇಲ್ಲಿಯ ಗಾಂಧಿ ವೃತ್ತದಲ್ಲಿ ಶನಿವಾರ ರಾತ್ರಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>‘ಅವರು ಮೂರು ಬಾರಿ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಆರೋಗ್ಯದ ಕಾರಣದಿಂದಾಗಿ ಸಕ್ರಿಯ ರಾಜಕೀಯದಿಂದ ನಿವೃತ್ತರಾದರು’ ಎಂದು ತಿಳಿಸಿದರು.</p>.<p>ಬಿಜೆಪಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಮಾತನಾಡಿ,‘ವಾಜಪೇಯಿ ಪ್ರಧಾನಿಯಾಗಿ ಭಾರತದ ಆರ್ಥಿಕಾಭಿವೃದ್ಧಿಯ ಬಗ್ಗೆ ಅಪಾರ ಕಾಳಜಿ ವಹಿಸಿದ್ದರು. ಇವರ ಕಾಲದಲ್ಲಿ ಜಾಗತಿಕವಾಗಿ ಆರ್ಥಿಕ ಹಿನ್ನಡೆ ಇತ್ತಾದರೂ ಭಾರತ ಶೇ. 5.8 ಜಿ.ಡಿ.ಪಿ ಅಭಿವೃದ್ಧಿ ಸಾಧಿಸಿದ್ದು ಒಂದು ಸಾಧನೆ’ ಎಂದರು.</p>.<p>ಸೂರ್ಯಕಾಂತ ದೋಣಿ ಉಪನ್ಯಾಸ ನೀಡಿದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬಿಎಸ್ಎಸ್ಕೆ ನಿರ್ದೇಶಕ ಮಲ್ಲಿಕಾರ್ಜುನ ಪಾಟೀಲ, ವಿಶ್ವನಾಥ ಪಾಟೀಲ, ಬಿಜೆಪಿ ಮುಖಂಡರಾದ ಸೂರ್ಯಕಾಂತ ಮಠಪತಿ, ರವಿ ಹೂಗಾರ್, ಪ್ರಭಾಕರ್ ನಾಗರಾಳೆ, ಪ್ರದೀಪ ವಾಗಲೆ, ರಾಜಪ್ಪ ಪೂಜಾರಿ ಹಾಗೂ ಸೋಮನಾಥ ಪಾಟೀಲ ವೇದಿಕೆಯಲ್ಲಿದ್ದರು.</p>.<p>ಕೇಕ್ ಕತ್ತರಿಸಿ ಜನ್ಮ ದಿನ ಆಚರಿಸಲಾಯಿತು.</p>.<p>ರಕ್ತ ದಾನ ಶಿಬಿರ ಏರ್ಪಡಿಸಲಾಗಿತ್ತು. ಶಿಬಿರದಲ್ಲಿ ಭಾಗವಹಿಸಿದ್ದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಅಲ್ಲದೆ, ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು.</p>.<p>ಹೈದರಾಬಾದ್ನ ನಾರಾಯಣ ಹೃದಯಾಲಯದ ಡಾ.ಡಿ.ಜೆ.ಡಿ ರಾವ್ ಅವರನ್ನು ಸನ್ಮಾನಿಸಲಾಯಿತು. ಪುರಸಭೆ ಅಧ್ಯಕ್ಷೆ ಮಾಲಾಶ್ರೀ ಶಾಮರಾವ್ ಅಧ್ಯಕ್ಷತೆ ವಹಿಸಿದ್ದರು. ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ಸಚಿನ್ ಮಠಪತಿ ವಂದಿಸಿದರು.</p>.<p class="Briefhead"><strong>ಹುಮನಾಬಾದ್: ಹಣ್ಣು, ಬ್ರೆಡ್ ವಿತರಣೆ<br />ಹುಮನಾಬಾದ್: ‘</strong>ಎಲ್ಲ ಪಕ್ಷದ ನಾಯಕರ ಜತೆಗೆ ಉತ್ತಮ ಬಾಂಧವ್ಯ ಹೊಂದಿ, ರಾಜಕೀಯ ಅಜಾತಶತ್ರು ಎಂಬ ಖ್ಯಾತಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾತ್ರರಾಗಿದ್ದರು’ ಎಂದು ಬಿಜೆಪಿ ಮುಖಂಡ ಡಾ.ಸಿದ್ದು ಪಾಟೀಲ ತಿಳಿಸಿದರು.</p>.<p>ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಪಟ್ಟಣದ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಿಸಿ ಅವರು ಮಾತನಾಡಿದರು.</p>.<p>‘ವಾಜಪೇಯಿ ಅವರು ರಾಜಕಾರಣಿ ಅಲ್ಲದೆ, ಶ್ರೇಷ್ಠ ಕವಿಯಾಗಿದ್ದರು. ದೇಶದ ಜನರ ಮನಸ್ಸಿನಲ್ಲಿ ಹಚ್ಚ ಹಸಿರಾಗಿ ಉಳಿದ ಅವರು ಇಂದಿನ ರಾಜಕೀಯ ನಾಯಕರಿಗೆ ಆದರ್ಶವಾಗಿದ್ದಾರೆ’ ಎಂದು ಹೇಳಿದರು.</p>.<p>ಬಿ.ಎಸ್.ಎಸ್.ಕೆ. ಕಾರ್ಖಾನೆ ನಿರ್ದೇಶಕ ವಿಶ್ವನಾಥ್ ಪಾಟೀಲ ಮಾಡಗೂಳ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪರಭಾಕರ್ ನಾಗರಾಳೆ, ಗಿರೀಶ್ ತುಂಬಾ, ಕರಬಸಪ್ಪ, ವೀರೇಶ್ ಸಜ್ಜನ್, ಅನಿಲ್ ಪಸರ್ಗಿ, ಶ್ರೀನಾಥ್ ದೇವಣಿ, ಸುನಿಲ್ ಪತ್ರಿ ಹಾಗೂ ಸಂಜು ವಾಡೆಕರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>