<p><strong>ಔರಾದ್</strong>: ಬೇಸಿಗೆ ಕಡು ಬಿಸಿಲು ಹಾಗೂ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನಲ್ಲಿ ಜನ-ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ.</p>.<p>ತಾಲ್ಲೂಕಿನ ವಿವಿಧೆಡೆ ಜನರಿಗೆ ಕುಡಿಯಲು ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳಿಗೆ ಕೆರೆಗಳಿಂದ ನೀರು ಪೂರೈಸಲಾಗುತ್ತಿದ್ದು, ಇತ್ತ ಅರಣ್ಯ ಇಲಾಖೆಯವರು ಪ್ರಾಣಿಗಳ ದಾಹ ತೀರಿಸಲು ಜಲತೊಟ್ಟಿ ವ್ಯವಸ್ಥೆ ಮಾಡಿದ್ದಾರೆ.</p>.<p>ತಾಲ್ಲೂಕಿನ ವಿವಿಧೆಡೆ ಎರಡು ಸಾವಿರ ಎಕರೆಗೂ ಜಾಸ್ತಿ ಅರಣ್ಯ ಪ್ರದೇಶವಿದ್ದು, ಇಲ್ಲಿ ಜಿಂಕೆ, ನವಿಲು, ಕೃಷ್ಣಮೃಗ, ನರಿ, ಕಾಡು ಹಂದಿ, ಮುಳ್ಳು ಹಂದಿ ಸೇರಿದಂತೆ ವಿವಿಧ ಪ್ರಕಾರದ ಕಾಡು ಪ್ರಾಣಿಗಳಿವೆ. ಬೇಸಿಗೆ ತಾಪಮಾನ ಹೆಚ್ಚುತ್ತಿರುವುದರಿಂದ ನದಿ, ಹಳ್ಳ, ಕೊಳ್ಳ, ಕೆರೆಗಳು ಬತ್ತಿ ಹೋಗಿರುವುದರಿಂದ ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇದರಿಂದ ಕೆಲ ಪ್ರಾಣಿಗಳು ನೀರು ಅರಸುತ್ತ ಜನವಸತಿ ಪ್ರದೇಶದ ಕಡೆಗೆ ನುಗ್ಗುತ್ತಿವೆ. ಇದನ್ನು ತಪ್ಪಿಸಲು ಅಧಿಕಾರಿಗಳು ಕಾಡು ಪ್ರಾಣಿಗಳಿರುವ ಅರಣ್ಯ ಪ್ರದೇಶದಲ್ಲಿ ಜಲತೊಟ್ಟಿ ವ್ಯವಸ್ಥೆ ಮಾಡಿದ್ದಾರೆ.</p>.<p>‘ತಾಲ್ಲೂಕಿನ ಗಡಿಕುಶನೂರ-2 ಹಾಗೂ ಆಲೂರ (ಕೆ), ಖಾನಾಪೂರ, ಚಿಂತಾಕಿ, ಚಟ್ನಾಳ ಅರಣ್ಯ ಪ್ರದೇಶದಲ್ಲಿ ತಲಾ ಒಂದು ಜಲತೊಟ್ಟಿ ನಿರ್ಮಾಣ ಮಾಡಿ ಪ್ರಾಣಿಗಳ ದಾಹ ನೀಗಿಸಲಾಗುತ್ತಿದೆ. ಫೆಬ್ರುವರಿ ತಿಂಗಳಿನಿಂದಲೇ ಜಲ ತೊಟ್ಟಿ ವ್ಯವಸ್ಥೆ ಮಾಡಿದ್ದೇವೆ. ಆದರೆ ಈಗ ತಾಪನಾನ ಹೆಚ್ಚಿರುವುದರಿಂದ ನೀರಿನ ಬೇಡಿಕೆ ಜಾಸ್ತಿಯಾಗಿದೆ. 10 ಸಾವಿರ ಲೀಟರ್ ಸಾಮರ್ಥ್ಯ ಜಲತೊಟ್ಟಿ 20 ದಿನಗಳಲ್ಲಿ ಖಾಲಿಯಾಗುತ್ತಿದೆ. ಜಲತೊಟ್ಟಿಯಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಗಸ್ತುಪಾಲಕ ಬಸವರಾಜ ಹೇಳುತ್ತಾರೆ.</p>.<p>ಪ್ರಾಣಿಗಳ ಕುಡಿಯುವ ನೀರಿನ ದಾಹ ತಣಿಸಲು ಸದ್ಯ ಆರು ಕಡೆ ಜಲತೊಟ್ಟಿ ನಿರ್ಮಾಣ ಮಾಡಿದ್ದೇವೆ. ಹೆಡಗಾಪೂರ, ರಕ್ಷಾಳ, ಚಿಕ್ಲಿ (ಜೆ)ಯಲ್ಲೂ ಇಂತಹ ಜಲ ತೊಟ್ಟಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಂ.ಡಿ. ಮದಸ್ಸಿರ್ ಅಹಮ್ಮದ್ ತಿಳಿಸಿದ್ದಾರೆ.</p>.<p>‘ಔರಾದ್ ತಾಲ್ಲೂಕಿನಲ್ಲಿ ಕೃಷ್ಣಮೃಗ ಹಾಗೂ ನವಿಲುಗಳ ಸಂಖ್ಯೆ ಜಾಸ್ತಿ ಇದೆ. ಇವುಗಳ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಬೇಸಿಗೆ ಮುಗಿಯುವ ತನಕ ಪ್ರಾಣಿಗಳ ದಾಹ ನೀಗಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.</p>.<div><blockquote>ತೀವ್ರ ಬಿಸಿಲಿನಿಂದಾಗಿ ಬಾವಿ-ಕೆರೆಗಳು ಬತ್ತಿ ಹೋಗಿ ಕಾಡು ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಪ್ರದೇಶದಲ್ಲಿ ಜಲತೊಟ್ಟಿ ನಿರ್ಮಾಣ ಮಾಡಲಾಗಿದೆ </blockquote><span class="attribution">ಎಂ.ಡಿ. ಮದಸ್ಸಿರ್ ಅಹಮ್ಮದ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್</strong>: ಬೇಸಿಗೆ ಕಡು ಬಿಸಿಲು ಹಾಗೂ ಹೆಚ್ಚುತ್ತಿರುವ ತಾಪಮಾನದಿಂದ ತಾಲ್ಲೂಕಿನಲ್ಲಿ ಜನ-ಜಾನುವಾರು ಹಾಗೂ ಪ್ರಾಣಿ ಪಕ್ಷಿಗಳಿಗೂ ಕುಡಿಯುವ ನೀರಿನ ಅಭಾವ ಎದುರಾಗಿದೆ.</p>.<p>ತಾಲ್ಲೂಕಿನ ವಿವಿಧೆಡೆ ಜನರಿಗೆ ಕುಡಿಯಲು ನೀರಿಗಾಗಿ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳಿಗೆ ಕೆರೆಗಳಿಂದ ನೀರು ಪೂರೈಸಲಾಗುತ್ತಿದ್ದು, ಇತ್ತ ಅರಣ್ಯ ಇಲಾಖೆಯವರು ಪ್ರಾಣಿಗಳ ದಾಹ ತೀರಿಸಲು ಜಲತೊಟ್ಟಿ ವ್ಯವಸ್ಥೆ ಮಾಡಿದ್ದಾರೆ.</p>.<p>ತಾಲ್ಲೂಕಿನ ವಿವಿಧೆಡೆ ಎರಡು ಸಾವಿರ ಎಕರೆಗೂ ಜಾಸ್ತಿ ಅರಣ್ಯ ಪ್ರದೇಶವಿದ್ದು, ಇಲ್ಲಿ ಜಿಂಕೆ, ನವಿಲು, ಕೃಷ್ಣಮೃಗ, ನರಿ, ಕಾಡು ಹಂದಿ, ಮುಳ್ಳು ಹಂದಿ ಸೇರಿದಂತೆ ವಿವಿಧ ಪ್ರಕಾರದ ಕಾಡು ಪ್ರಾಣಿಗಳಿವೆ. ಬೇಸಿಗೆ ತಾಪಮಾನ ಹೆಚ್ಚುತ್ತಿರುವುದರಿಂದ ನದಿ, ಹಳ್ಳ, ಕೊಳ್ಳ, ಕೆರೆಗಳು ಬತ್ತಿ ಹೋಗಿರುವುದರಿಂದ ಪ್ರಾಣಿಗಳಿಗೆ ಕುಡಿಯುವ ನೀರಿನ ಅಭಾವ ಎದುರಾಗಿದೆ. ಇದರಿಂದ ಕೆಲ ಪ್ರಾಣಿಗಳು ನೀರು ಅರಸುತ್ತ ಜನವಸತಿ ಪ್ರದೇಶದ ಕಡೆಗೆ ನುಗ್ಗುತ್ತಿವೆ. ಇದನ್ನು ತಪ್ಪಿಸಲು ಅಧಿಕಾರಿಗಳು ಕಾಡು ಪ್ರಾಣಿಗಳಿರುವ ಅರಣ್ಯ ಪ್ರದೇಶದಲ್ಲಿ ಜಲತೊಟ್ಟಿ ವ್ಯವಸ್ಥೆ ಮಾಡಿದ್ದಾರೆ.</p>.<p>‘ತಾಲ್ಲೂಕಿನ ಗಡಿಕುಶನೂರ-2 ಹಾಗೂ ಆಲೂರ (ಕೆ), ಖಾನಾಪೂರ, ಚಿಂತಾಕಿ, ಚಟ್ನಾಳ ಅರಣ್ಯ ಪ್ರದೇಶದಲ್ಲಿ ತಲಾ ಒಂದು ಜಲತೊಟ್ಟಿ ನಿರ್ಮಾಣ ಮಾಡಿ ಪ್ರಾಣಿಗಳ ದಾಹ ನೀಗಿಸಲಾಗುತ್ತಿದೆ. ಫೆಬ್ರುವರಿ ತಿಂಗಳಿನಿಂದಲೇ ಜಲ ತೊಟ್ಟಿ ವ್ಯವಸ್ಥೆ ಮಾಡಿದ್ದೇವೆ. ಆದರೆ ಈಗ ತಾಪನಾನ ಹೆಚ್ಚಿರುವುದರಿಂದ ನೀರಿನ ಬೇಡಿಕೆ ಜಾಸ್ತಿಯಾಗಿದೆ. 10 ಸಾವಿರ ಲೀಟರ್ ಸಾಮರ್ಥ್ಯ ಜಲತೊಟ್ಟಿ 20 ದಿನಗಳಲ್ಲಿ ಖಾಲಿಯಾಗುತ್ತಿದೆ. ಜಲತೊಟ್ಟಿಯಲ್ಲಿ ಸದಾ ನೀರು ಇರುವಂತೆ ನೋಡಿಕೊಳ್ಳಲಾಗುತ್ತಿದೆ’ ಎಂದು ಅರಣ್ಯ ಇಲಾಖೆ ಗಸ್ತುಪಾಲಕ ಬಸವರಾಜ ಹೇಳುತ್ತಾರೆ.</p>.<p>ಪ್ರಾಣಿಗಳ ಕುಡಿಯುವ ನೀರಿನ ದಾಹ ತಣಿಸಲು ಸದ್ಯ ಆರು ಕಡೆ ಜಲತೊಟ್ಟಿ ನಿರ್ಮಾಣ ಮಾಡಿದ್ದೇವೆ. ಹೆಡಗಾಪೂರ, ರಕ್ಷಾಳ, ಚಿಕ್ಲಿ (ಜೆ)ಯಲ್ಲೂ ಇಂತಹ ಜಲ ತೊಟ್ಟಿ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಂ.ಡಿ. ಮದಸ್ಸಿರ್ ಅಹಮ್ಮದ್ ತಿಳಿಸಿದ್ದಾರೆ.</p>.<p>‘ಔರಾದ್ ತಾಲ್ಲೂಕಿನಲ್ಲಿ ಕೃಷ್ಣಮೃಗ ಹಾಗೂ ನವಿಲುಗಳ ಸಂಖ್ಯೆ ಜಾಸ್ತಿ ಇದೆ. ಇವುಗಳ ರಕ್ಷಣೆ ನಮ್ಮ ಹೊಣೆ. ಹೀಗಾಗಿ ಬೇಸಿಗೆ ಮುಗಿಯುವ ತನಕ ಪ್ರಾಣಿಗಳ ದಾಹ ನೀಗಿಸಲು ನಾವು ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.</p>.<div><blockquote>ತೀವ್ರ ಬಿಸಿಲಿನಿಂದಾಗಿ ಬಾವಿ-ಕೆರೆಗಳು ಬತ್ತಿ ಹೋಗಿ ಕಾಡು ಪ್ರಾಣಿಗಳ ದಾಹ ನೀಗಿಸಲು ಅರಣ್ಯ ಪ್ರದೇಶದಲ್ಲಿ ಜಲತೊಟ್ಟಿ ನಿರ್ಮಾಣ ಮಾಡಲಾಗಿದೆ </blockquote><span class="attribution">ಎಂ.ಡಿ. ಮದಸ್ಸಿರ್ ಅಹಮ್ಮದ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>