ಪಟ್ಟಣದ ಕನ್ನಡಾಂಬೆ ವೃತ್ತದಿಂದ ಮಿನಿ ವಿಧಾನಸೌಧದವರೆಗಿನ ಒಂದೂವರೆ ಕಿಲೋ ಮೀಟರ್ನಷ್ಟು ರಸ್ತೆ ಹಾಳಾಗಿ ಪಟ್ಟಣದ ಅಂದ ಹದಗೆಡಿಸಿದೆ. ಬಸ್ ನಿಲ್ದಾಣ, ಸರ್ಕಾರಿ ಆಸ್ಪತ್ರೆ, ನ್ಯಾಯಾಲಯಕ್ಕೆ ಹೋಗುವ ಈ ಹದಗೆಟ್ಟ ರಸ್ತೆಯಿಂದ ವಾಹನ ಸವಾರರು ನಿತ್ಯ ಸಂಕಟ ಎದುರಿಸ ಬೇಕಾಗಿದೆ. ಅದರಲ್ಲೂ ಈ ರಸ್ತೆ ಅಕ್ಕ-ಪಕ್ಕದ ಅಂಗಡಿಯವರು ದೂಳಿನಿಂದಾಗಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.