<p><strong>ಔರಾದ್:</strong> ‘ಛತ್ರಪತಿ ಶಿವಾಜಿ ಮಹಾರಾಜರು ಅನ್ಯಾಯ ಹಾಗೂ ಅಧರ್ಮದ ವಿರುದ್ಧ ಹೋರಾಡಿದವರು ಎಂದು ಮಹಾರಾಷ್ಟ್ರದ ಮಧುಕರ ಮಹಾರಾಜ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ದೇಶದಾದ್ಯಂತ ಸ್ವರಾಜ್ಯದ ಪರಿಕಲ್ಪನೆಯನ್ನು ಪರಿಚಯಿಸಿ ಜನರಲ್ಲಿ ಆತ್ಮಗೌರವ ಮತ್ತು ಹೋರಾಟದ ಕಿಚ್ಚು ತುಂಬಿದರು. ಯಾವುದೇ ಧರ್ಮ ಅಥವಾ ವ್ಯಕ್ತಿಯನ್ನು ಬೇರೆ ಬೇರೆ ಎಂದು ಭಾವಿಸದೆ ಸಮಾನ ನ್ಯಾಯ ನೀಡಿದ ಅತ್ಯುತ್ತಮ ಆಡಳಿತಗಾರರಾಗಿದ್ದರು. ಮರಾಠಾ ಎಂಬುದು ಕೇವಲ ಒಂದು ಜಾತಿ ಅಲ್ಲ, ಅದು ಅನ್ಯಾಯದ ವಿರುದ್ಧ ಹೋರಾಡುವ ಒಂದು ಸಂಸ್ಕೃತಿ’ ಎಂದರು.</p>.<p>ತಹಶೀಲ್ದಾರ್ ಮಹೇಶ ಪಾಟೀಲ ಮಾತನಾಡಿ, ‘ಶಿವಾಜಿ ಮಹಾರಾಜರು ಜನರಲ್ಲಿ ಸ್ವಾಭಿಮಾನ ಹಾಗೂ ಸ್ವರಾಜ್ಯದ ಬೀಜ ಬಿತ್ತಿದರು. ಅವರಲ್ಲಿನ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಬೇಕು’ ಎಂದರು.</p>.<p>ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಜ್ಞಾನಶ್ರೀ ಮಹಾರಾಜ, ಮಾರುತಿ ವಾಡೆಕರ್ ಮಾತನಾಡಿದರು.</p>.<p>ಚೇತನ ಕಪ್ಪೆಕೇರಿ, ಶಿವಾಜಿರಾವ ಪಾಟೀಲ ಮುಂಗನಾಳ, ಪ್ರತಿಕ್ ಚವಾಣ್, ರಘುನಾಥರಾವ ಜಾಧವ್, ಧೊಂಡಿಬಾ ನರೋಟೆ, ಖಂಡು ರಂದವೇ, ರಾಮಣ್ಣ ವಡೆಯರ್, ಪ್ರವೀಣ ಕಾರಬಾರಿ, ಅಬ್ದುಲ್ ರಹೀಮಸಾಬ್, ಅಮರ ಜಾಧವ್ ಮತ್ತಿತರರು ಇದ್ದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ (ಎಪಿಎಂಸಿ) ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು, ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಔರಾದ್:</strong> ‘ಛತ್ರಪತಿ ಶಿವಾಜಿ ಮಹಾರಾಜರು ಅನ್ಯಾಯ ಹಾಗೂ ಅಧರ್ಮದ ವಿರುದ್ಧ ಹೋರಾಡಿದವರು ಎಂದು ಮಹಾರಾಷ್ಟ್ರದ ಮಧುಕರ ಮಹಾರಾಜ ಹೇಳಿದರು.</p>.<p>ಪಟ್ಟಣದಲ್ಲಿ ಶನಿವಾರ ರಾತ್ರಿ ನಡೆದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಉತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ದೇಶದಾದ್ಯಂತ ಸ್ವರಾಜ್ಯದ ಪರಿಕಲ್ಪನೆಯನ್ನು ಪರಿಚಯಿಸಿ ಜನರಲ್ಲಿ ಆತ್ಮಗೌರವ ಮತ್ತು ಹೋರಾಟದ ಕಿಚ್ಚು ತುಂಬಿದರು. ಯಾವುದೇ ಧರ್ಮ ಅಥವಾ ವ್ಯಕ್ತಿಯನ್ನು ಬೇರೆ ಬೇರೆ ಎಂದು ಭಾವಿಸದೆ ಸಮಾನ ನ್ಯಾಯ ನೀಡಿದ ಅತ್ಯುತ್ತಮ ಆಡಳಿತಗಾರರಾಗಿದ್ದರು. ಮರಾಠಾ ಎಂಬುದು ಕೇವಲ ಒಂದು ಜಾತಿ ಅಲ್ಲ, ಅದು ಅನ್ಯಾಯದ ವಿರುದ್ಧ ಹೋರಾಡುವ ಒಂದು ಸಂಸ್ಕೃತಿ’ ಎಂದರು.</p>.<p>ತಹಶೀಲ್ದಾರ್ ಮಹೇಶ ಪಾಟೀಲ ಮಾತನಾಡಿ, ‘ಶಿವಾಜಿ ಮಹಾರಾಜರು ಜನರಲ್ಲಿ ಸ್ವಾಭಿಮಾನ ಹಾಗೂ ಸ್ವರಾಜ್ಯದ ಬೀಜ ಬಿತ್ತಿದರು. ಅವರಲ್ಲಿನ ದೇಶಭಕ್ತಿ ಇಂದಿನ ಯುವಕರಿಗೆ ಮಾದರಿಯಾಗಬೇಕು’ ಎಂದರು.</p>.<p>ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಜ್ಞಾನಶ್ರೀ ಮಹಾರಾಜ, ಮಾರುತಿ ವಾಡೆಕರ್ ಮಾತನಾಡಿದರು.</p>.<p>ಚೇತನ ಕಪ್ಪೆಕೇರಿ, ಶಿವಾಜಿರಾವ ಪಾಟೀಲ ಮುಂಗನಾಳ, ಪ್ರತಿಕ್ ಚವಾಣ್, ರಘುನಾಥರಾವ ಜಾಧವ್, ಧೊಂಡಿಬಾ ನರೋಟೆ, ಖಂಡು ರಂದವೇ, ರಾಮಣ್ಣ ವಡೆಯರ್, ಪ್ರವೀಣ ಕಾರಬಾರಿ, ಅಬ್ದುಲ್ ರಹೀಮಸಾಬ್, ಅಮರ ಜಾಧವ್ ಮತ್ತಿತರರು ಇದ್ದರು.</p>.<p>ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಕನ್ನಡಾಂಬೆ (ಎಪಿಎಂಸಿ) ವೃತ್ತದಿಂದ ಬಸವೇಶ್ವರ ವೃತ್ತದ ವರೆಗೆ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು, ಗಣ್ಯರು, ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>