ಭಾಲ್ಕಿ: ತಾಲ್ಲೂಕಿನ ಕುಂಟೆ ಸಿರ್ಸಿ ಗ್ರಾಮದ ವೇದಾಂತ ಅಲ್ಲಮಪ್ರಭು ಆನಂದವಾಡೆ ಇದ್ದ ಐದು ಜನರ ತಂಡ ಯಂಗ್ ಅರ್ಥ್ ಚಾಂಪಿಯನ್ಸ್ ಪ್ರಶಸ್ತಿ ಪಡೆದಿದೆ.
ಈ ತಂಡ ಪ್ಯಾರಿಸ್ನಲ್ಲಿರುವ ಯುನೆಸ್ಕೊದ ಪ್ರಧಾನ ಕಚೇರಿಯಲ್ಲಿ ಪ್ರಶಸ್ತಿಯ ಜತೆಗೆ ನಗದನ್ನು ಬಹುಮಾನವಾಗಿ ಪಡೆದಿದೆ.
ಅಸ್ಸಾಂನಲ್ಲಿ ಹವಾಮಾನ ಬದಲಾವಣೆಯ ಪ್ರವಾಹದಿಂದಾಗಿ ಮನೆಗಳು ನಾಶವಾಗಿದ್ದವು. ಹಾಗಾಗಿ, ಈ ವಿದ್ಯಾರ್ಥಿಗಳು ಪ್ರವಾಹದಿಂದ ನಾಶವಾಗದ ಮತ್ತು ಪ್ರವಾಹಕ್ಕೆ ಒಳಗಾಗದ ಮನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದಾರೆ.
ಈ ಸ್ಪರ್ಧೆಯಲ್ಲಿ ವಿಶ್ವದ 500ಕ್ಕೂ ಹೆಚ್ಚು ಕಾಲೇಜು ಹಾಗೂ ವಿಶ್ವದ ಟಾಪ್ 15ರಲ್ಲಿ ಗುರುತಿಸಿಕೊಂಡಿದ್ದ ವಿಶ್ವವಿದ್ಯಾಲಯಗಳ ಮಕ್ಕಳು ಭಾಗವಹಿಸಿದ್ದರು. 2021ರ ಮಾರ್ಚ್ ತಿಂಗಳಲ್ಲಿ ಈಗೀಸ್ (EGiS) ಫೌಂಡೇಶನ್ ವತಿಯಿಂದ ಈ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ಸ್ಪರ್ಧೆ ನಡೆಸಲಾಗಿತ್ತು.
ಸದ್ಯ ಹೈದರಾಬಾದ್ನಲ್ಲಿ ವಾಸಿಸುತ್ತಿರುವ ವೇದಾಂತ ಅವರ ತಂದೆ ಅಲ್ಲಮಪ್ರಭು ಮತ್ತು ತಾಯಿ ವಿಜಯಲಕ್ಷ್ಮಿ ಆನಂದವಾಡೆ ವೃತ್ತಿಯಿಂದ ವೈದ್ಯರಾಗಿದ್ದಾರೆ.