<p>ಬಸವಕಲ್ಯಾಣ: ‘ನಗರದಲ್ಲಿ ಜೂನ್ 28 ಕ್ಕೆ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾರಥ್ಯದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.</p>.<p>ನಗರದ ಸದಾನಂದಸ್ವಾಮಿ ಮಠದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಕೆಲವರು ಈ ಬಗ್ಗೆ ಅಪಸ್ವರ ತೆಗೆದು ಬಸವಾದಿ ಶಿವಶರಣರನ್ನು ಹಿಂದೂ ಮಹಾಸಾಗರದಿಂದ ದೂರ ಸರಿಸುತ್ತಿದ್ದಾರೆ. ಆದರೆ ಶಿವಶರಣರು ಹಿಂದೂ ವಿಚಾರಗಳಿಂದ ದೂರವಿಲ್ಲ. ಅನೇಕರು ಹಿಂದುತ್ವ ಮರೆಯುತ್ತಿರುವ ಕಾರಣ ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಯಾರ ಪರ ಅಥವಾ ವಿರೋಧಕ್ಕೆ ಮತ್ತು ಪಕ್ಷ ಭೇದಕ್ಕೆ ಆಸ್ಪದವಿಲ್ಲ. ಹಿಂದೂ ಧರ್ಮದ ಬಗ್ಗೆ ಹೆಮ್ಮೆಪಡುವವರು ಕಾರ್ಯಕ್ರಮಕ್ಕೆ ಓಡೋಡಿ ಬರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಕೂಲಂಕಷ ಚರ್ಚೆಗೆ ಮತ್ತೆ ಜೂನ್ 7 ರಂದು ಸಭೆ ನಡೆಯಲಿದೆ’ ಎಂದರು.</p>.<p>ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜಸ್ವಾಮಿ ತ್ರಿಪುರಾಂತ ಮಾತನಾಡಿ, ‘ಸಮಾವೇಶದಲ್ಲಿ 300 ಮಠಾಧೀಶರು ಭಾಗವಹಿಸುವರು. ಕಾಯಕ, ದಸೋಹ ಮತ್ತು ಕೃಷಿ ಇವು ಸರ್ವಸಮಾನತೆ ಸಾರುವಂಥವು. ಅವುಗಳ ಮಹತ್ವ ಬಿತ್ತರಿಸುವುದಕ್ಕಾಗಿಯೇ ಸಮಾವೇಶ ನಡೆಸಲಾಗುತ್ತಿದೆ’ ಎಂದರು.</p>.<p>ಮುಖಂಡ ಗುಂಡುರೆಡ್ಡಿ ಮಾತನಾಡಿ, ‘ಕನ್ಹೇರಿ ಸ್ವಾಮೀಜಿ ನೇತೃತ್ವದಲ್ಲಿ ಈ ಮೊದಲು ಇತರೆಡೆ ಸಮಾವೇಶಗಳು ನಡೆದಿವೆ. ಜಾತಿಭೇದ ಮರೆತು ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ವಿನಂತಿಸಿದರು.</p>.<p>ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಅಂಬಿಗರ ಚೌಡಯ್ಯ ಜಾಗೃತಿ ಪೀಠಾಧ್ಯಕ್ಷ ರತ್ನಾಕಾಂತ ಸ್ವಾಮೀಜಿ, ಸದ್ಲಾಪುರ ಸಿದ್ದೇಶ್ವರ ಸ್ವಾಮೀಜಿ, ಬಜರಂಗದಳದ ಸಂಚಾಲಕ ರವಿ ನಾವದ್ಗೇಕರ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಅನಿಸಿಕೆ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-33-1920886072</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ‘ನಗರದಲ್ಲಿ ಜೂನ್ 28 ಕ್ಕೆ ಕನ್ಹೇರಿ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾರಥ್ಯದಲ್ಲಿ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ’ ಎಂದು ಮುಚಳಂಬ ಪ್ರಣವಾನಂದ ಸ್ವಾಮೀಜಿ ತಿಳಿಸಿದರು.</p>.<p>ನಗರದ ಸದಾನಂದಸ್ವಾಮಿ ಮಠದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.</p>.<p>‘ಕೆಲವರು ಈ ಬಗ್ಗೆ ಅಪಸ್ವರ ತೆಗೆದು ಬಸವಾದಿ ಶಿವಶರಣರನ್ನು ಹಿಂದೂ ಮಹಾಸಾಗರದಿಂದ ದೂರ ಸರಿಸುತ್ತಿದ್ದಾರೆ. ಆದರೆ ಶಿವಶರಣರು ಹಿಂದೂ ವಿಚಾರಗಳಿಂದ ದೂರವಿಲ್ಲ. ಅನೇಕರು ಹಿಂದುತ್ವ ಮರೆಯುತ್ತಿರುವ ಕಾರಣ ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಈ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಯಾರ ಪರ ಅಥವಾ ವಿರೋಧಕ್ಕೆ ಮತ್ತು ಪಕ್ಷ ಭೇದಕ್ಕೆ ಆಸ್ಪದವಿಲ್ಲ. ಹಿಂದೂ ಧರ್ಮದ ಬಗ್ಗೆ ಹೆಮ್ಮೆಪಡುವವರು ಕಾರ್ಯಕ್ರಮಕ್ಕೆ ಓಡೋಡಿ ಬರುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಕೂಲಂಕಷ ಚರ್ಚೆಗೆ ಮತ್ತೆ ಜೂನ್ 7 ರಂದು ಸಭೆ ನಡೆಯಲಿದೆ’ ಎಂದರು.</p>.<p>ಶ್ರೀಮದ್ವೀರಶೈವ ಸದ್ಬೋಧನಾ ಸಂಸ್ಥೆ ಅಧ್ಯಕ್ಷ ಡಾ.ಬಸವರಾಜಸ್ವಾಮಿ ತ್ರಿಪುರಾಂತ ಮಾತನಾಡಿ, ‘ಸಮಾವೇಶದಲ್ಲಿ 300 ಮಠಾಧೀಶರು ಭಾಗವಹಿಸುವರು. ಕಾಯಕ, ದಸೋಹ ಮತ್ತು ಕೃಷಿ ಇವು ಸರ್ವಸಮಾನತೆ ಸಾರುವಂಥವು. ಅವುಗಳ ಮಹತ್ವ ಬಿತ್ತರಿಸುವುದಕ್ಕಾಗಿಯೇ ಸಮಾವೇಶ ನಡೆಸಲಾಗುತ್ತಿದೆ’ ಎಂದರು.</p>.<p>ಮುಖಂಡ ಗುಂಡುರೆಡ್ಡಿ ಮಾತನಾಡಿ, ‘ಕನ್ಹೇರಿ ಸ್ವಾಮೀಜಿ ನೇತೃತ್ವದಲ್ಲಿ ಈ ಮೊದಲು ಇತರೆಡೆ ಸಮಾವೇಶಗಳು ನಡೆದಿವೆ. ಜಾತಿಭೇದ ಮರೆತು ಎಲ್ಲರೂ ಪಾಲ್ಗೊಳ್ಳಬೇಕು’ ಎಂದು ವಿನಂತಿಸಿದರು.</p>.<p>ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಅಂಬಿಗರ ಚೌಡಯ್ಯ ಜಾಗೃತಿ ಪೀಠಾಧ್ಯಕ್ಷ ರತ್ನಾಕಾಂತ ಸ್ವಾಮೀಜಿ, ಸದ್ಲಾಪುರ ಸಿದ್ದೇಶ್ವರ ಸ್ವಾಮೀಜಿ, ಬಜರಂಗದಳದ ಸಂಚಾಲಕ ರವಿ ನಾವದ್ಗೇಕರ್ ಮತ್ತಿತರರು ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಅನಿಸಿಕೆ ವ್ಯಕ್ತಪಡಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260601-33-1920886072</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>