<p>ಬಸವಕಲ್ಯಾಣ: ಅರಣ್ಯ ಇಲಾಖೆಯವರು ಗುರುವಾರ ನಗರದ ಮುಖ್ಯ ರಸ್ತೆಯಲ್ಲಿನ ಒಣಗಿದ ಹಾಗೂ ರಸ್ತೆಗೆ ವಾಲಿದ ಕೊಂಬೆಗಳನ್ನು ಕಡಿದಿದ್ದಾರೆ.</p>.<p>ಪ್ರಜಾವಾಣಿಯಲ್ಲಿ ಮೇ 6 ರಂದು `ಒಣಗಿದ ಕೊಂಬೆಗಳಿಂದ ಅಪಾಯ ಸಾಧ್ಯತೆ' ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯವರು ಕೊಂಬೆಗಳನ್ನು ಕಡಿಯುವ ಕಾರ್ಯ ಆರಂಭಿಸಿದ್ದಾರೆ.</p>.<p>ನಗರಸಭೆ ಆಯುಕ್ತ ರಾಜೀವ ಬಣಕಾರ್ ಸಹ ಪತ್ರಿಕೆಯಲ್ಲಿನ ವರದಿಯನ್ನು ಉಲ್ಲೇಖಿಸಿ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘ಗಾಳಿ, ಮಳೆಗೆ ಕೊಂಬೆಗಳು ಜನರ ಮೇಲೆ ಬಿದ್ದರೆ ಅನಾಹುತ ಸಂಭವಿಸಬಹುದು ಆದ್ದರಿಂದ ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದ್ದಾರೆ.</p>.<p>‘ವಲಯ ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ ನಗರದ ತ್ರಿಪುರಾಂತ ಮೌನೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಎದುರಿನ ರಸ್ತೆಗೆ ವಾಲಿದ ಮರಗಳ ಕೊಂಬೆ ಕಡಿದಿದ್ದೇವೆ’ ಎಂದು ಇಲಾಖೆ ಸಿಬ್ಬಂದಿ ಶಿವಕುಮಾರ ತಿಳಿಸಿದ್ದಾರೆ.</p>.<p>‘ಇತರೆಡೆ ಇರುವ ಮರಗಳ ಒಣಗಿದ ಕೊಂಬೆಗಳನ್ನು ಸಹ ಕಡಿಯಲಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-33-1105861265</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ಅರಣ್ಯ ಇಲಾಖೆಯವರು ಗುರುವಾರ ನಗರದ ಮುಖ್ಯ ರಸ್ತೆಯಲ್ಲಿನ ಒಣಗಿದ ಹಾಗೂ ರಸ್ತೆಗೆ ವಾಲಿದ ಕೊಂಬೆಗಳನ್ನು ಕಡಿದಿದ್ದಾರೆ.</p>.<p>ಪ್ರಜಾವಾಣಿಯಲ್ಲಿ ಮೇ 6 ರಂದು `ಒಣಗಿದ ಕೊಂಬೆಗಳಿಂದ ಅಪಾಯ ಸಾಧ್ಯತೆ' ಎಂಬ ಶೀರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆಯವರು ಕೊಂಬೆಗಳನ್ನು ಕಡಿಯುವ ಕಾರ್ಯ ಆರಂಭಿಸಿದ್ದಾರೆ.</p>.<p>ನಗರಸಭೆ ಆಯುಕ್ತ ರಾಜೀವ ಬಣಕಾರ್ ಸಹ ಪತ್ರಿಕೆಯಲ್ಲಿನ ವರದಿಯನ್ನು ಉಲ್ಲೇಖಿಸಿ ಅರಣ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ‘ಗಾಳಿ, ಮಳೆಗೆ ಕೊಂಬೆಗಳು ಜನರ ಮೇಲೆ ಬಿದ್ದರೆ ಅನಾಹುತ ಸಂಭವಿಸಬಹುದು ಆದ್ದರಿಂದ ಶೀಘ್ರದಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು’ ಎಂದು ಅವರು ಸೂಚಿಸಿದ್ದಾರೆ.</p>.<p>‘ವಲಯ ಅರಣ್ಯಾಧಿಕಾರಿಗಳ ಸಲಹೆ ಮೇರೆಗೆ ನಗರದ ತ್ರಿಪುರಾಂತ ಮೌನೇಶ್ವರ ದೇವಸ್ಥಾನದ ಪ್ರವೇಶ ದ್ವಾರದ ಎದುರಿನ ರಸ್ತೆಗೆ ವಾಲಿದ ಮರಗಳ ಕೊಂಬೆ ಕಡಿದಿದ್ದೇವೆ’ ಎಂದು ಇಲಾಖೆ ಸಿಬ್ಬಂದಿ ಶಿವಕುಮಾರ ತಿಳಿಸಿದ್ದಾರೆ.</p>.<p>‘ಇತರೆಡೆ ಇರುವ ಮರಗಳ ಒಣಗಿದ ಕೊಂಬೆಗಳನ್ನು ಸಹ ಕಡಿಯಲಾಗುತ್ತದೆ’ ಎಂದು ತಿಳಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260508-33-1105861265</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>