<p>ಬಸವಕಲ್ಯಾಣ: ‘ಬಸವಾದಿ ಶರಣರ ನಾಡಿನಲ್ಲಿ ಗೋಹತ್ಯೆ ಆಗಕೂಡದು. ಅದನ್ನು ತಡೆಯುವುದಕ್ಕೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ’ ಎಂದು ಶಾಸಕ ಶರಣು ಸಲಗರ ಹೇಳಿದರು.</p>.<p>ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾನೊಬ್ಬ ಶಾಸಕ ಎನಿಸಿಕೊಳ್ಳುವುದಕ್ಕಿಂತ ಗೋರಕ್ಷಕ ಎನಿಸಿಕೊಳ್ಳಲು ಇಷ್ಟಪಡುತ್ತೇನೆ. ಗೋರಕ್ಷಣೆ ಎಲ್ಲಕ್ಕಿಂತ ಪವಿತ್ರ ಕಾರ್ಯ’ ಎಂದಿದ್ದಾರೆ.</p>.<p>‘ಬಕ್ರೀದ್ ಹಬ್ಬಕ್ಕೆ ಲಕ್ಷಾಂತರ ಗೋವುಗಳ ಹತ್ಯೆ ನಡೆಯುತ್ತದೆ. ಕುರಾನ್ನಲ್ಲಿ ಗೋಹತ್ಯೆ ಮಾಡಲು ಹೇಳಿಲ್ಲ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದರೂ ಈ ಪದ್ಧತಿ ನಿಲ್ಲುತ್ತಿಲ್ಲ. ನಾನು ಈ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನನ್ನ ಮೇಲೆಯೇ ಪ್ರಕರಣ ದಾಖಲಾಗಿದೆ. ಇದು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ.</p>.<p>‘ಮೊದಲು ಹಿಂದೂಗಳಿಂದ ಗೋವುಗಳ ಮಾರಾಟ ತಡೆಯಿರಿ ಎಂದು ಕೆಲವರು ನನಗೆ ಸಲಹೆ ನೀಡಿದ್ದಾರೆ. ಆದ್ದರಿಂದ ಜೀವನಪರ್ಯಂತ ಆಕಳು, ಎತ್ತುಗಳನ್ನು ದುಡಿಸಿಕೊಂಡು ಮುಪ್ಪಾದಾಗ ಅವುಗಳ ಮಾರಾಟ ಮಾಡುವುದು ಸರಿಯಲ್ಲ. ಅವುಗಳ ಸಂರಕ್ಷಣೆ ಮಾಡಬೇಕು’ ಎಂದು ರೈತರಲ್ಲಿ ವಿನಂತಿಸಿದ್ದಾರೆ.</p>.<p>ಗೋವಿನ ತಿಪ್ಪೆ ಗೊಬ್ಬರ ಜಮೀನಿಗೆ ಫಲವತ್ತತೆ ನೀಡುತ್ತದೆ. ಬಕ್ರೀದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋಹತ್ಯೆ ಆಗದಂತೆ ಸಂಬಂಧಿತರು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-33-2098951955</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಸವಕಲ್ಯಾಣ: ‘ಬಸವಾದಿ ಶರಣರ ನಾಡಿನಲ್ಲಿ ಗೋಹತ್ಯೆ ಆಗಕೂಡದು. ಅದನ್ನು ತಡೆಯುವುದಕ್ಕೆ ಯಾವುದೇ ತ್ಯಾಗಕ್ಕೂ ನಾನು ಸಿದ್ಧನಿದ್ದೇನೆ’ ಎಂದು ಶಾಸಕ ಶರಣು ಸಲಗರ ಹೇಳಿದರು.</p>.<p>ಶನಿವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾನೊಬ್ಬ ಶಾಸಕ ಎನಿಸಿಕೊಳ್ಳುವುದಕ್ಕಿಂತ ಗೋರಕ್ಷಕ ಎನಿಸಿಕೊಳ್ಳಲು ಇಷ್ಟಪಡುತ್ತೇನೆ. ಗೋರಕ್ಷಣೆ ಎಲ್ಲಕ್ಕಿಂತ ಪವಿತ್ರ ಕಾರ್ಯ’ ಎಂದಿದ್ದಾರೆ.</p>.<p>‘ಬಕ್ರೀದ್ ಹಬ್ಬಕ್ಕೆ ಲಕ್ಷಾಂತರ ಗೋವುಗಳ ಹತ್ಯೆ ನಡೆಯುತ್ತದೆ. ಕುರಾನ್ನಲ್ಲಿ ಗೋಹತ್ಯೆ ಮಾಡಲು ಹೇಳಿಲ್ಲ. ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಿದ್ದರೂ ಈ ಪದ್ಧತಿ ನಿಲ್ಲುತ್ತಿಲ್ಲ. ನಾನು ಈ ಕಾರ್ಯದಲ್ಲಿ ತೊಡಗಿಸಿಕೊಂಡಾಗ ನನ್ನ ಮೇಲೆಯೇ ಪ್ರಕರಣ ದಾಖಲಾಗಿದೆ. ಇದು ನ್ಯಾಯವೇ’ ಎಂದು ಪ್ರಶ್ನಿಸಿದ್ದಾರೆ.</p>.<p>‘ಮೊದಲು ಹಿಂದೂಗಳಿಂದ ಗೋವುಗಳ ಮಾರಾಟ ತಡೆಯಿರಿ ಎಂದು ಕೆಲವರು ನನಗೆ ಸಲಹೆ ನೀಡಿದ್ದಾರೆ. ಆದ್ದರಿಂದ ಜೀವನಪರ್ಯಂತ ಆಕಳು, ಎತ್ತುಗಳನ್ನು ದುಡಿಸಿಕೊಂಡು ಮುಪ್ಪಾದಾಗ ಅವುಗಳ ಮಾರಾಟ ಮಾಡುವುದು ಸರಿಯಲ್ಲ. ಅವುಗಳ ಸಂರಕ್ಷಣೆ ಮಾಡಬೇಕು’ ಎಂದು ರೈತರಲ್ಲಿ ವಿನಂತಿಸಿದ್ದಾರೆ.</p>.<p>ಗೋವಿನ ತಿಪ್ಪೆ ಗೊಬ್ಬರ ಜಮೀನಿಗೆ ಫಲವತ್ತತೆ ನೀಡುತ್ತದೆ. ಬಕ್ರೀದ್ ಹಬ್ಬಕ್ಕೆ ಯಾವುದೇ ಕಾರಣಕ್ಕೂ ಗೋಹತ್ಯೆ ಆಗದಂತೆ ಸಂಬಂಧಿತರು ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-33-2098951955</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>