ಸಚಿವ ಖೂಬಾ ಅವರ ಆಪ್ತ ಬಿಜೆಪಿಯ ದೀಪಕ ಪಾಟೀಲ ಚಾಂದೋರಿ ಅವರು ಹೇಳಿಕೆ ನೀಡಿದ್ದು, ‘ಕೇಂದ್ರ ಸಚಿವರ ಜತೆ ದೂರವಾಣಿಯಲ್ಲಿ ಮಾತನಾಡಿದ ವ್ಯಕ್ತಿ ರೈತನಲ್ಲ. ಆತ ಸರ್ಕಾರಿ ಶಾಲೆಯ ಶಿಕ್ಷಕ. ಜನಪ್ರತಿನಿಧಿಗಳ ಜತೆ ಕೆರಳಿಸುವ ರೀತಿಯಲ್ಲಿ ಮಾತನಾಡಿ ಅದನ್ನು ರಿಕಾರ್ಡ್ ಮಾಡಿ ನಂತರ ಬ್ಲ್ಯಾಕ್ಮೇಲ್ ಮಾಡುವ ಕೆಲಸ ಅವರದ್ದು. ಹೀಗಾಗಿ ಅವರು ಬಿಡುಗಡೆ ಮಾಡಿದ ಧ್ವನಿ ಸುರುಳಿಯ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಬಾರದು’ ಎಂದಿದ್ದಾರೆ.