ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ ಸಿಪಿಐ ರಾಘವೇಂದ್ರ ಅಮಾನತು

Last Updated 26 ಜನವರಿ 2022, 15:10 IST
ಅಕ್ಷರ ಗಾತ್ರ

ಬೀದರ್: ವ್ಯಾಪಾರಿಯೊಬ್ಬರಿಂದ ಲಂಚ ಸ್ವೀಕರಿಸಿದ ಆರೋ‍ಪದ ಮೇಲೆ ಭಾಲ್ಕಿ ಸಿಪಿಐ ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ.

ರಾಘವೇಂದ್ರ ಭಾಲ್ಕಿಯ ಸಿರ್ಸೆ ಪೆಟ್ರೋಲ್ ಬಂಕ್ ಸಮೀಪದ ಆಟೊಮೊಬೈಲ್ ಅಂಗಡಿಯಲ್ಲಿ ವ್ಯಾಪಾರಿಯಿಂದ ಹಣ ಪಡೆಯುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್ ನೀಡಿದ ವರದಿಯನ್ನು ಆಧರಿಸಿ ರಾಘವೇಂದ್ರ ಅವರನ್ನು ಕಲಬುರಗಿ ಐಜಿಪಿ ಅಮಾನತು ಮಾಡಿದ್ದಾರೆ.

ಸಿಪಿಐ ಅಂಗಡಿಯಲ್ಲಿ ವ್ಯಾಪಾರಿಯಿಂದ ಹಣ ಪಡೆಯುತ್ತಿರುವ ವಿಡಿಯೊ ವೈರಲ್‌ ಆಗುತ್ತಿದ್ದಂತೆಯೇ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ಅವರು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದರು. ನಾಗೇಶ ಅವರು ಐಜಿ ಅವರಿಗೆ ವರದಿ ನೀಡಿದ ನಂತರ ಅಮಾನತು ಆದೇಶ ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT