<p><strong>ಭಾಲ್ಕಿ (ಬೀದರ್ ಜಿಲ್ಲೆ):</strong> ಪಟ್ಟಣದ ಗುರು ಕಾಲೊನಿಯಲ್ಲಿ ಶನಿವಾರ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಸುಮಾರು 6.5 ತೊಲೆ ಬಂಗಾರ, 1 ಲಕ್ಷ ನಗದು ಕಳುವಾಗಿದೆ. </p><p>ಇನ್ನೊಂದು ಮನೆಯ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. </p><p>ಸುನಿತಾ ಹನುಮಂತ ಕಟಗೆ ಅವರು ಮನೆಯ ಮೇಲಿನ ತಗಡದ ಪತ್ರಗಳು ಹಾರುವ ಭಯದಿಂದ ಪಕ್ಕದ ಕೋಣೆಯಲ್ಲಿ ಮಲಗಿದ್ದಾಗ ಇನ್ನೊಂದು ಕೋಣೆಯ ಬೀಗ ಮುರಿದು 6 ತೊಲೆ ಬಂಗಾರ, 1 ಲಕ್ಷ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. </p><p>ಯೋಗೇಶ ಶಿವಕಾಂತ ಹಿರೇಮಠ ಕುಟುಂಬಸ್ಥರು ಸಂಬಂಧಿಕರು ನಿಧನ ಹೊಂದಿದ್ದಕ್ಕಾಗಿ ಅನ್ಯ ಊರಿಗೆ ತೆರಳಿದ್ದರು. ಹಾಗಾಗಿ, ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಕಳ್ಳರು ಇವರ ಮನೆಯಿಂದ 5 ಗ್ರಾಂ. ಬಂಗಾರ ಕದ್ದೊಯ್ದಿದ್ದಾರೆ.</p><p> ಕಳ್ಳತನ ನಡೆದ ಮನೆಗಳಿಗೆ ಬೆರಳಚ್ಚು ತಜ್ಞರ ತಂಡ, ಪೊಲೀಸ್ ಶ್ವಾನತಂಡ, ಡಿವೈಎಸ್ಪಿ ಬಲಪ್ಪ ನಂದಗಾವಿ ಭೇಟಿ ನೀಡಿ, ಕಳ್ಳರ ಪತ್ತೆಗಾಗಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. </p><p>ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ (ಬೀದರ್ ಜಿಲ್ಲೆ):</strong> ಪಟ್ಟಣದ ಗುರು ಕಾಲೊನಿಯಲ್ಲಿ ಶನಿವಾರ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದ್ದು, ಸುಮಾರು 6.5 ತೊಲೆ ಬಂಗಾರ, 1 ಲಕ್ಷ ನಗದು ಕಳುವಾಗಿದೆ. </p><p>ಇನ್ನೊಂದು ಮನೆಯ ಬೀಗ ಮುರಿದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. </p><p>ಸುನಿತಾ ಹನುಮಂತ ಕಟಗೆ ಅವರು ಮನೆಯ ಮೇಲಿನ ತಗಡದ ಪತ್ರಗಳು ಹಾರುವ ಭಯದಿಂದ ಪಕ್ಕದ ಕೋಣೆಯಲ್ಲಿ ಮಲಗಿದ್ದಾಗ ಇನ್ನೊಂದು ಕೋಣೆಯ ಬೀಗ ಮುರಿದು 6 ತೊಲೆ ಬಂಗಾರ, 1 ಲಕ್ಷ ನಗದು ಹಣವನ್ನು ಕಳ್ಳರು ಕಳ್ಳತನ ಮಾಡಿದ್ದಾರೆ. </p><p>ಯೋಗೇಶ ಶಿವಕಾಂತ ಹಿರೇಮಠ ಕುಟುಂಬಸ್ಥರು ಸಂಬಂಧಿಕರು ನಿಧನ ಹೊಂದಿದ್ದಕ್ಕಾಗಿ ಅನ್ಯ ಊರಿಗೆ ತೆರಳಿದ್ದರು. ಹಾಗಾಗಿ, ಮನೆಯಲ್ಲಿ ಯಾರು ಇರಲಿಲ್ಲ. ಈ ವೇಳೆ ಕಳ್ಳರು ಇವರ ಮನೆಯಿಂದ 5 ಗ್ರಾಂ. ಬಂಗಾರ ಕದ್ದೊಯ್ದಿದ್ದಾರೆ.</p><p> ಕಳ್ಳತನ ನಡೆದ ಮನೆಗಳಿಗೆ ಬೆರಳಚ್ಚು ತಜ್ಞರ ತಂಡ, ಪೊಲೀಸ್ ಶ್ವಾನತಂಡ, ಡಿವೈಎಸ್ಪಿ ಬಲಪ್ಪ ನಂದಗಾವಿ ಭೇಟಿ ನೀಡಿ, ಕಳ್ಳರ ಪತ್ತೆಗಾಗಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ. </p><p>ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>