ಜನವಾಡ: ಬೀದರ್ ತಾಲ್ಲೂಕಿನ ಆಣದೂರುವಾಡಿ ಗ್ರಾಮದಲ್ಲಿ ಜೈ ಮಂತ್ರಾಲ ಭವಾನಿ ಜಾತ್ರಾ ಮಹೋತ್ಸವ ಶ್ರದ್ಧೆ, ಭಕ್ತಿಯಿಂದ ಜರುಗಿತು.
ಸಹಸ್ರ ದೀಪೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಅವರು, ಕೋವಿಡ್ನಿಂದ ಜನ ಎರಡು ವರ್ಷ ತೊಂದರೆ ಅನುಭವಿಸಿದ್ದಾರೆ. ಭವಾನಿ ಮಾತೆ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ ಎಂದು ಪ್ರಾರ್ಥಿಸಿದರು.
ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಶಾಂತಕುಮಾರ ರಾಠೋಡ್, ಜಾತ್ರೆ ಸ್ವಾಗತ ಸಮಿತಿ ಅಧ್ಯಕ್ಷ ಬಸವರಾಜ ಪವಾರ್, ಸಮಾಜದ ಮುಖಂಡ ಗೋಪಾಲ್ಸಿಂಗ್ ಠಾಕೂರ್, ದೇವಸ್ಥಾನದ ಅಧ್ಯಕ್ಷ ವಾಲ್ಮೀಕ ರಾಠೋಡ್, ಕಾರ್ಯದರ್ಶಿ ಭಗುಸಿಂಗ್ ಜಾಧವ್, ಪುಷ್ಪಕಕುಮಾರ ಜಾಧವ್ ಇದ್ದರು.